ಗಣರಾಜ್ಯೋತ್ಸವದ ಪ್ರಯುಕ್ತ ಸುರಿಬೈಲಿನಲ್ಲಿ ರಕ್ತದಾನ ಶಿಬಿರ

Update: 2020-01-27 05:23 GMT

ಕಲ್ಲಡ್ಕ, ಜ.27: ದೇಶದ 70ನೇ ಗಣರಾಜ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರಿಬೈಲ್ ಹಾಗೂ ಸುಲ್ತಾನ್ ಸ್ಸೋಟ್ಸ್ ಕ್ಲಬ್ ಸುರಿಬೈಲ್ ಇವುಗಳ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಸುರಿಬೈಲ್ ಜಂಕ್ಷನ್ ನಲ್ಲಿ ರವಿವಾರ ನಡೆಯಿತು.

ಸುಲ್ತಾನ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ನಾಝ್ ಧ್ವಜಾರೋಹಣಗೈದರು. ಎಸ್.ಡಿ.ಪಿ.ಐ. ಬೊಳಂತೂರು ವಲಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಿ. ಸಭಾಧ್ಯಕ್ಷತೆ ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಲ್ಲಡ್ಕ ಡಿವಿಷನ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಕಲ್ಲಡ್ಕ ದುಆಗೈದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಲ್ಕಾರ್ ಮಹಿಳಾ ಕಾಲೇಜು ಉಪನ್ಯಾಸಕ ಎಂ.ಡಿ.ಮಾಯಿಲಾ ಮಂಚಿ ಪ್ರಜಾಪ್ರಭುತ್ವ ಮತ್ತು ರಕ್ತದಾನದ ಮಹತ್ವದ ಬಗ್ಗೆ ಸಂದೇಶ ನೀಡಿದರು.

ವಿಟ್ಲ ಆರಕ್ಷಕ ಠಾಣಾಧಿಕಾರಿ ವಿನೋದ್ ರೆಡ್ಡಿ, ಸಾಲೆತ್ತೂರು ನಿತ್ಯಾದರ್ ಚರ್ಚ್ ಧರ್ಮಗುರು ಸ್ವಾಮಿ ಹೆನ್ರಿ ಡಿಸೋಜ ಮತ್ತು ಮೆಸ್ಕಾಂ ಗುತ್ತಿಗೆದಾರ ಸುಲೈಮಾನ್ ಅಪೊಲೊ ಮಾತನಾಡಿ ಶುಭಹಾರೈಸಿದರು.

ಎಸ್.ಡಿ.ಪಿ.ಐ. ಬಂಟ್ವಾಳ ಕೇತ್ರ ಅಧ್ಯಕ್ಷ ಹಾಜಿ ಯೂಸುಫ್ ಆಲಡ್ಕ, ಕಾರ್ಯದರ್ಶಿ ಇಸ್ಮಾಯೀಲ್ ಬಾವಾ, ಪಿ.ಎಫ್.ಐ. ವಿಟ್ಲ ವಲಯಾಧ್ಯಕ್ಷ ಝಕರಿಯಾ ಗೋಳ್ತಮಜಲು, ಪಿಎಫ್.ಐ.ಯ ಶಾಹುಲ್ ಹಮೀದ್ ಬೊಳಂತೂರು, ಸುರಿಬೈಲು ಜಮಾಅತ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಬ್ಲಡ್ ಹೆಲ್ಫ್ ಲೈನ್ ಫೈಝಲ್ ಮಂಚಿ, ಎಸ್.ಡಿ.ಪಿ.ಐ. ಮಂಚಿ ವಲಯಾಧ್ಯಕ್ಷ ನವಾಝ್ ಅಹ್ಮದ್ ಕೋಡಿಬೈಲು, ಅಬ್ದುಲ್ ಖಾದರ್ ಶೆಡ್, ಸುಲೈಮಾನ್ ಬಿ.ಎಸ್. ಫಾರೂಕ್ ಅಕ್ಕರೆ ಉಪಸ್ಥಿತರಿದ್ದರು.

ಶಿಬಿರದಲ್ಲಿ 68 ಯುನಿಟ್ ರಕ್ತ ಸಂಗ್ರಹಿಸಲಾಯಿತು. ವಾಯ್ಸ್ ಆಫ್ ಕರ್ನಾಟಕ ಅಶ್ರಫ್ ಅರಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News