ಸಾಲೆತ್ತೂರು ಮದ್ರಸದಲ್ಲಿ ಸಂಭ್ರಮದ ಗಣರಾಜ್ಯೋತ್ಸವ

Update: 2020-01-27 06:07 GMT

ವಿಟ್ಲ, ಜ.27: ಸಾಲೆತ್ತೂರು ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.

ಇಲ್ಲಿನ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಎಸ್.ಕೆ.  ದ್ವಜಾರೊಹಣಗೈದರು. ಮಸೀದಿಯ ಖತೀಬ್ ಅಬ್ದುಲ್ಲ ಮದನಿ ಪಾತೂರು ಅದ್ಯಕ್ಷತೆ ವಹಿಸಿದ್ದರು.

ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಜುನೈದ್ ಕೊಡಗು ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.

ನಾಸಿರ್ ಉಸ್ತಾದ್ ಕಟ್ಟತ್ತಿಲ, ಮದ್ರಸ  ಅಧ್ಯಾಪಕ  ಶಿಹಾಬುದ್ದೀನ್ ಇರ್ಫಾನಿ  ಮಾಡನ್ನೂರು,  ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಸುಲ್ಯೆಮಾನ್ ಗಾಡಿ, ಉಮರ್ ಕುಂಞಿ, ಬದ್ರಿಯಾ ಜುಮಾ ಮಸೀದಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News