ಮೇನಾಲ: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ
Update: 2020-01-27 06:27 GMT
ಪುತ್ತೂರು, ಜ.27: ಮೇನಾಲದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ ಗಣರಾಜ್ಯೋತ್ಸದ ಶುಭಾಶಯವನ್ನು ಕೋರಿದರು. ಶಿಕ್ಷಕಿ ಆಯಿಷತ್ ಸಾಬಿರ ಸಂದೇಶವನ್ನು ನೀಡಿದರು.
ನಿರ್ದೇಶಕರಾದ ಅಹ್ಮದ್ ಕಬೀರ್, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮುಹಮ್ಮದ್, ಆಡಳಿತಾಧಿಕಾರಿ ಮುಹಮ್ಮದ್ ಸಾಮು, ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕಿಯರಾದ ಶ್ರೀ ಪ್ರಿಯಾ, ರೇಷ್ಮಾ, ನಿಶಾನ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲಾ, ಇಸ್ಮಾಯೀಲ್, ರಿತೀಶ್, ಇಬ್ರಾಹೀಂ, ಶಿವ ಬಾಲನ್, ರಾಮ್ ಲಖನ್ ಉಪಸ್ಥಿತರಿದ್ದರು.
ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್ ಕೆ ಸ್ವಾಗತಿಸಿದರು. ಶಿಕ್ಷಕಿ ಶಮೀಮ ವಂದಿಸಿದರು.