ಶಾಸಕ ಯು.ಟಿ. ಖಾದರ್ ಗೆ ಬೆದರಿಕೆ: ಬೆಳ್ಮ ಕಾಂಗ್ರೆಸ್ ಮುಖಂಡರಿಂದ ಕೊಣಾಜೆ ಠಾಣೆಗೆ ದೂರು

Update: 2020-01-29 12:27 GMT

ಉಳ್ಳಾಲ: ಮಂಗಳೂರಿನಲ್ಲಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಎನ್ ಆರ್ ಸಿ ಪರ ನಡೆದ ಸಭೆಯಲ್ಲಿ ಭಾಗವಹಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ರವರಿಗೆ ತಲೆ ಕಡಿಯುತ್ತೇವೆಂದು ಬೆದರಿಕೆ ಹಾಕಿದ ವಿರುದ್ಧ ಕೊಣಾಜೆ ಪೋಲೀಸ್ ಠಾಣೆಯಲ್ಲಿ ಬೆಳ್ಮ ನಾಗರಿಕರು ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತ್ತಾರ್ ಸಿ.ಎಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿರಾಜ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಯೂಸುಫ್ ಬಾವಾ, ಅಬ್ದುಲ್ಲಾ,ಕಬೀರ್ ದೇರಳಕಟ್ಟೆ, ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅರುಣ್, ಈಶ್ವರ್ ಉಳ್ಳಾಲ, ಯುವ ಕಾಂಗ್ರೆಸ್ ಕಾರ್ಯದರ್ಶಿ ಶಮೀರ್ ಪಜೀರ್, ನೌಫಾಲ್ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News