ಪರ್ಕಳದಲ್ಲಿ ನೂತನ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ
Update: 2020-01-29 14:47 GMT
ಉಡುಪಿ, ಜ.29: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಉಡುಪಿ ವೃತ್ತದಿಂದ ಬಡಗುಬೆಟ್ಟು ಪರ್ಕಳದಲ್ಲಿ ನೂತನವಾಗಿ ನಿರ್ಮಿಸಲಾದ 33/11ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಕಾಪು ಶಾಸಕ ಲಾಲಾಜಿ ಮೆಂಡನ್ ಬುಧವಾರ ಉದ್ಘಾಟಿಸಿದರು.
ಅಧ್ಯಕ್ಷತೆ ಮಂಗಳೂರು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಆನಂದ ನಾಯಕ ವಹಿಸಿದ್ದರು. ಮಂಗಳೂರು ಮೆಸ್ಕಾಂ ಮುಖ್ಯ ಎಂಜಿನಿಯರ್ ಪದ್ಮಾವತಿ, 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತಾರಾಮ್, ಮಾಹೆ ನಿರ್ದೇಶಕ ಶ್ರೀಧರ್ ರಾವ್, ಸುಕೇಶ್ ಪರ್ಕಳ, ದಿನೇಶ್ ಉಪಾದ್ಯಾಯ, ಗಣರಾಜ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಮಗಾರಿ ನಡೆಸಿದ ಪುಷ್ಪಎಲೆಟ್ರಿಕ್ ಸಂಸ್ಥೆಯ ಮಾಲಕರಾದ ಗಣಪ್ಪಯ್ಯ ಶೆಟ್ಟಿ, ಪುಷ್ಪಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್ ಸ್ವಾಗತಿಸಿ ದರು. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಮಾರ್ತಂಡಪ್ಪ ವಂದಿಸಿದರು.