ಕುಂದಾಪುರ: ಜೇನುತುಪ್ಪ ಬದಲು ಇಲಿ ಪಾಷಾಣ ಸೇವಿಸಿ ಮಹಿಳೆ ಮೃತ್ಯು

Update: 2020-01-29 17:10 GMT

ಕುಂದಾಪುರ, ಜ.29: ಮಹಿಳೆಯೊಬ್ಬರು ಜೇನುತುಪ್ಪಎಂದು ತಿಳಿದು ಇಲಿಗೆ ಹಾಕುವ ಪಾಷಾಣ ಸೇವಿಸಿ ಮೃತಪಟ್ಟ ಘಟನೆ ವಡೇರಹೋಬಳಿ ಗ್ರಾಮದ ಬೊರ್ಬ್ಬಯನ ಕ್ಟೆ ಎದುರು ರಸ್ತೆ ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಅನುಪಮಾ(55) ಎಂದು ಗುರುತಿಸಲಾಗಿದೆ. ಮಾನಸಿಕ ಖಾಯಿಲೆಯಿಂದ ಬಳತ್ತಿದ್ದ ಇವರು, ಜ.23ರಂದು ಮಧ್ಯಾಹ್ನ ಮನೆಯಲ್ಲಿ ಔಷದವನ್ನು ತೆಗೆದುಕೊಳ್ಳುವಾಗ ಜೇನುತುಪ್ಪ ಎಂದು ತಿಳಿದು ಇಲಿ ಪಾಷಾಣವನ್ನು ಸೇವಿಸಿದ್ದರು.

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ.29ರಂದು ಮಧ್ಯಾಹ್ನ ವೇಳೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News