ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ವಾರ್ಷಿಕ ಸಭೆ
ಸಾಲೆತ್ತೂರ್, ಜ.29: ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ವಾರ್ಷಿಕ ಮಹಾಸಭೆಯು ಪಂಜರಕೋಡಿಯ ನೂರುಲ್ ಉಲೂಂ ಮದ್ರಸದಲ್ಲಿ ಇತ್ತೀಚೆಗೆ ನಡೆಯಿತು.
ಯುನಿಟ್ ಅಧ್ಯಕ್ಷ ದಾವೂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಜರಕೋಡಿ ಮಸೀದಿಯ ಖತೀಬ್ ಅಬೂಬಕರ್ ಮದನಿ ದುಆಗೈದರು.
ನಾಸಿರ್ ಮಿತ್ತರಾಜೆ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಯಝೀದ್ ಕಲ್ಲಕಟ್ಟ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸೆಕ್ಟರ್ ವೀಕ್ಷಕರಾಗಿ ಲುಕ್ಮಾನ್ ಕುಕ್ಕಾಜೆ, ಫರ್ವಾಝ್ ಮಂಚಿ ಭಾಗವಹಿಸಿದ್ದರು.
ಸಮಿತಿಯ ನೂತನ ಅಧ್ಯಕ್ಷರಾಗಿ ರಫೀಕ್ ಮಿತ್ತರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಸೂದ್ ಅಬ್ಬೆಮ್ಮಾರ್, ಕೋಶಾಧಿಕಾರಿಯಾಗಿ ಯೂಸುಫ್ ಮಿತ್ತರಾಜೆ, ಉಪಾಧ್ಯಕ್ಷರಾಗಿ ನಝೀರ್ ಮಿತ್ತರಾಜೆ, ಹನೀಫ್ ಮಿತ್ತರಾಜೆ, ಮಾಧ್ಯಮ ಕಾರ್ಯದರ್ಶಿಯಾಗಿ ನಾಸಿರ್ ಮಿತ್ತರಾಜೆ, ಕಾರ್ಯದರ್ಶಿಯಾಗಿ ಫೈಝಲ್ ಮಿತ್ತರಾಜೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಬಶೀರ್ ಮಿತ್ತರಾಜೆ, ಮಹಿಳಾ ತರಗತಿಯ ಉಸ್ತುವಾರಿಗಳಾಗಿ ದಾವೂದ್ ಅಬ್ಬೆಮ್ಮಾರ್, ಶರೀಫ್ ಹನೀಫಿ, ಖಲೀಳ್ ಮಿತ್ತರಾಜೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯಝೀದ್ ಕಲ್ಲಕಟ್ಟ, ಶರೀಫ್ ಅಬ್ಬೆಮ್ಮಾರ್, ಹಕೀಂ ವರ್ಗ, ರಹೀಂ ಮಣ್ಣಗದ್ದೆ, ಇಶಾಕ್ ಮಿತ್ತರಾಜೆ, ಅಲ್ತಾಫ್ ಪಂಜರಕೋಡಿ, ಜಲೀಲ್ ಎಂಕೆ, ಹಕೀಂ ಮಿತ್ತರಾಜೆ ಆಯ್ಕೆಗೊಂಡರು.