​ರಾಜ್ಯ ಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2020-01-29 17:46 GMT

ಮಂಗಳೂರು, ಜ.29: ಮದರಂಗಿ ಪತ್ರಿಕೆಯು ‘ಈದ್ ಮೀಲಾದ್’ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮುನೀರಾ ತೊಕ್ಕೊಟ್ಟು (ಪ್ರಥಮ), ಸಹನಾ ಕಾಂತಬೈಲು ಮಡಿಕೇರಿ (ದ್ವಿತೀಯ),ನಿಝಾಮ್ ಪದ್ಮುಂಜ (ತೃತೀಯ) ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಹಿದಾಯತ್ ಕಂಡ್ಲೂರಿ ಕುಂದಾಪುರ, ಝುಲೇಖಾ ಮುಮ್ತಾಝ್, ಅಥಾವುಲ್ಲಾ ಇಬ್ರಾಹೀಂ ಮೈಸೂರು, ರುಕ್ಸಾನಾ ಫಾತಿಮಾ ಉಪ್ಪಿನಂಗಡಿ, ಮುಹಮ್ಮದ್ ಕಬೀರ್ ಬಕ್ರವಳ್ಳಿ, ಅಮ್ರೀನ ಕ್ಯುಟಿಎಫ್‌ ಉಜಿರೆ, ಅಬೂಶಹೀರ್ ಅಬ್ದುಲ್ ರಝಾಕ್ ಮದನಿ ಕಬಕ, ಎನ್.ಎಸ್.ಶರೀಫ್ ಕೈರಂಗಳ ಅವರ ಪ್ರಬಂಧ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ಕವನ ಸ್ಪರ್ಧೆಯಲ್ಲಿ ಮಿಸ್ರಿಯಾ ಇಸ್ಮತ್ ಫಜೀರ್ (ಪ್ರಥಮ),ಎನ್.ವಿಶ್ವನಾಥ್ ನೇರಳಕಟ್ಟೆ (ದ್ವಿತೀಯ),ರಮ್ಲತ್ ನಂದರಬೆಟ್ಟು (ತೃತೀಯ) ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಶಾಕಿರಾ ಉಪ್ಪಿನಂಗಡಿ, ಸಫಾ ಕಾರ್ಕಳ, ಎನ್.ಕೆ.ಮುಹಮ್ಮದ್ ಹನೀಫ್ ನಂದರಬೆಟ್ಟು, ಮೊಗೇರಿ ಶೇಖರ ದೇವಾಡಿಗ ಭಟ್ರಮನೆ ಬ್ರಹ್ಮಾವರ, ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು, ರುಕ್ಸಾನಾ ಫಾತಿಮಾ ಉಪ್ಪಿನಂಗಡಿ, ಜಯಶ್ರೀ ಬೈಲುಪದವು ಪುಣಚ, ರಹ್ಮತ್ ಪುತ್ತೂರು, ಯಶ್ವಿತ್, ಅಶೀರುದ್ದೀನ್ ಮಂಜನಾಡಿ, ರಫೀಕ್ ಕಲ್ಕಟ್ಟ, ಗ್ರೀಶ್ಮಾ ಕೆ.ಎಚ್.ಕೊಡಿಪ್ಪಾಡಿ ಪುತ್ತೂರು ಅವರ ಕವನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ಫೆ.2ರಂದು ಅಪರಾಹ್ನ 2ಕ್ಕೆ ನಡೆಯುವ ಮದರಂಗಿ ಪತ್ರಿಕೆ ಪರಿಷ್ಕೃತ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಮದರಂಗಿ ಪತ್ರಿಕೆಯ ಸಂಪಾದಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News