ಫೆ.1ರಂದು ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಇಲ್ಲ

Update: 2020-01-31 14:30 GMT

ಹೊಸದಿಲ್ಲಿ: ಫೆಬ್ರವರಿ 1ರಂದು ನಡೆಯಬೇಕಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಗಲ್ಲು ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಇಂದು ಮುಂದಿನ ಆದೇಶದವರೆಗೆ ಮುಂದೂಡಿದೆ.

ಫೆಬ್ರವರಿ 1ರಂದು ನಡೆಯಲಿದ್ದ ಗಲ್ಲುಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಾಧೀಶ ಧರ್ಮೇಂದರ್ ರಾಣಾ ಈ ಆದೇಶ ನೀಡಿದರು.

ನ್ಯಾಯಾಧೀಶರು ಈ ಆದೇಶ ನೀಡಿದ ನಂತರ ನಿರ್ಭಯಾ ತಾಯಿ ಆಶಾ ದೇವಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು.  "ಆರೋಪಿಗಳ ಪರ ವಕೀಲ ಎ.ಪಿ. ಸಿಂಗ್ 'ಗಲ್ಲು ಶಿಕ್ಷೆ ಯಾವತ್ತೂ ನಡೆಯುವುದಿಲ್ಲ" ಎಂದು ತನಗೆ ಹೇಳಿದರು ಎಂದು ಆಶಾ ದೇವಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News