ಶಾಹಿನ್ ಬಾಗ್‍ ಪ್ರತಿಭಟನಕಾರರ ಜೊತೆ ಮಾತುಕತೆಗೆ ಸರಕಾರ ಸಿದ್ಧ, ಆದರೆ...

Update: 2020-02-01 09:29 GMT

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರುದ್ಧ ದಿಲ್ಲಿಯ ಶಾಹಿನ್ ಬಾಗ್‍ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು 'ವ್ಯವಸ್ಥಿತ ರೀತಿಯಲ್ಲಿ' ಮನವಿ ಮಾಡಿದರೆ ನರೇಂದ್ರ ಮೋದಿ ಸರ್ಕಾರ ಅವರ ಜತೆ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

" ಶಾಹಿನ್ ಬಾಗ್‍ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಲು ಸರ್ಕಾರ ಸಿದ್ಧ. ಆದರೆ ಅದು ಯೋಜಿತ ರೀತಿಯಲ್ಲಿರಬೇಕು. ಅವರೊಂದಿಗೆ ಸಂವಾದಕ್ಕೆ ನರೇಂದ್ರ ಮೋದಿ ಸರ್ಕಾರ ಸಿದ್ಧವಾಗಿದ್ದು, ಸಿಎಎ ವಿರುದ್ಧದ ಎಲ್ಲ ಸಂದೇಹಗಳನ್ನು ಬಗೆಹರಿಸಲಾಗುವುದು" ಎಂದು ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಸಿಎಎ ಕುರಿತ ಪ್ರಶ್ನೆಗೆ ಟಿವಿ ವಾಹಿನಿಯೊಂದರಲ್ಲಿ ಸಚಿವರು ನೀಡುತ್ತಿರುವ ಉತ್ತರ ಕುರಿತ ವಿಡಿಯೊ ತುಣುಕನ್ನೂ ಸಚಿವರು ಶೇರ್ ಮಾಡಿದ್ದಾರೆ.

ಈ ಮಧ್ಯೆ ಶಾಹಿನ್ ಬಾಗ್‍ ಪ್ರತಿಭಟನೆ ಬಿಜೆಪಿಯ ಚುನಾವಣಾ ರ್ಯಾಲಿಯಲ್ಲೂ ಪ್ರತಿಧ್ವನಿಸಿದೆ. ಪ್ರತಿಭಟನಕಾರರು ಕಾಂಗ್ರೆಸ್ ಹಾಗೂ ಎಎಪಿಯಿಂದ ನೆರವು ಪಡೆಯುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News