ಅಲ್ ಮದೀನ ಮಂಜನಾಡಿ: ಕತರ್ ಸಮಿತಿಯಿಂದ ಸ್ನೇಹ ಸಂಗಮ ಕಾರ್ಯಕ್ರಮ

Update: 2020-02-02 17:46 GMT

ದೋಹ : ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಕತರ್ ಸಮಿತಿ ವತಿಯಿಂದ ಸ್ನೇಹ ಸಂಗಮ ಕಾರ್ಯಕ್ರಮವು ನ್ಯೂ ಅಮ್ವಾಝ್ ರೆಸ್ಟೋರೆಂಟ್ ನಲ್ಲಿ ಇತ್ತೀಚಿಗೆ ನಡೆಯಿತು.

ಫಾರೂಕ್ ಕೃಷ್ಣಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕ ಭಾಷಣ ಮಾಡಿದರು. 

ಬಳಿಕ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ಹಾಜಿ ಅರಬಿ ಕುಂಞಿ ಸಾಂಬಾರ್ ತೋಟ, ಪ್ರಧಾನ ಕಾರ್ಯದರ್ಶಿ ಖಲೀಲ್ ಕಟ್ಟೆಮಾರ್, ಖಜಾಂಚಿ ಇಬ್ರಾಹಿಂ ಆಯ್ಕೆಯಾದರು.

ಸಿದ್ದೀಕ್ ಹಂಡುಗುಳಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News