ಅನಂತ ಕುಮಾರ್ ಹೆಗಡೆ ಬೇಷರತ್ ಕ್ಷಮೆಯಾಚನೆಗೆ ಬಿಜೆಪಿ ಸೂಚನೆ

Update: 2020-02-03 10:10 GMT

ಹೊಸದಿಲ್ಲಿ: ಮಹಾತ್ಮಾ ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನು 'ನಾಟಕ' ಎಂದು ಹೇಳಿ ವಿವಾದ ಸೃಷ್ಟಿಸಿರುವ ಸಂಸದ ಅನಂತ ಕುಮಾರ್ ಹೆಗಡೆ ಬೇಷರತ್ ಕ್ಷಮೆ ಯಾಚನೆಗೆ ಬಿಜೆಪಿ ಸೂಚನೆ ನೀಡಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹೆಗಡೆ, ಕೆಲವು ಹೋರಾಟಗಾರರು ನಾವು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರೊಂದಿಗೆ ಕೇಳುತ್ತಿದ್ದರು. ನೀವು ಹೇಳಿದ ಹಾಗೆ ಮಾಡುತ್ತೇವೆ ಎನ್ನುತ್ತಿದ್ದರು. ನಾವು ಹೋರಾಟ ಮಾಡಿದ ಹಾಗೆ ಮಾಡುತ್ತೇವೆ, ನೀವು ಬಂಧಿಸಿದ ಹಾಗೆ ಮಾಡಿ ಎಂದು ಅವರು ಹೇಳುತ್ತಿದ್ದರು. ಇವರೆಲ್ಲಾ ಲಾಠಿ ಏಟು ತಿನ್ನದವರು. ಇಂದು ಇವರೇ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News