ಪುತ್ತೂರು: 'ಸುಡೊಮೊನಾಸ್' ಕಾಯಿಲೆಗೆ ಯುವಕ ಬಲಿ

Update: 2020-02-07 16:52 GMT

ಪುತ್ತೂರು; ಶೌಚಾಲಯದ ಮೂಲಕ ಮನುಷ್ಯನ ದೇಹಕ್ಕೆ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ 'ಸುಡೊಮೊನಾಸ್' ಎಂಬ ಅಪರೂಪದ ಕಾಯಿಲೆಗೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಅವಿವಾಹಿತ ಯುವಕ ಬಲಿಯಾಗಿದ್ದಾರೆ.

ಬಜತ್ತೂರು ಗ್ರಾಮದ ಮಣಿಕ್ಕಳಬೈಲು ಬರೆಮೇಲು ನಿವಾಸಿ ಚೆನ್ನಪ್ಪ ಗೌಡ ಅವರ ಪುತ್ರ ಶ್ರೀಧರ ಗೌಡ (29) ಈ ರೋಗದಿಂದ ಮೃತಪಟ್ಟ ಯುವಕ. ವರ್ಷದ ಹಿಂದೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದರು. ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಪ್ರಾರಂಭಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆ ನೋವು ಕಡಿಮೆಯಾದರೂ ಚೇತರಿಸಿಕೊಳ್ಳದ ಶ್ರೀಧರ್ ಗೌಡ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ. ಸದಾ ಚಟುವಟಿಕೆಯ ಯುವಕನಾಗಿದ್ದ ಶ್ರೀಧರ್ ಗೌಡ ಅವರ ಹಠಾತ್ ಸಾವಿನಿಂದ ಕುಟುಂಬ ಕಂಗೆಟ್ಟಿದೆ.

ಮೃತರು ತಂದೆ, ತಾಯಿ, ಮೂರು ಮಂದಿ ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News