ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆಯ ಪ್ರಥಮ ಮಾಸಿಕ ಸಭೆ

Update: 2020-02-08 04:16 GMT

ಮಂಗಳೂರು, ಫೆ.8: ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆಯ ಪ್ರಥಮ ಮಾಸಿಕ ಸಭೆಯು ಫೆ.7ರಂದು ಬಂದರ್ ಸಮಸ್ತ ಕಚೇರಿಯಲ್ಲಿ ನಡೆಯಿತು.

ನಡುಪಳ್ಳಿ ಜುಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ಸಭೆಯನ್ನು ಉದ್ಘಾಟಿಸಿದರು. ಬಿ.ಎ.ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಉಪಾಧ್ಯಕ್ಷ ನವಾಝ್ ಕುದ್ರೋಳಿ, ಮಂಗಳೂರು ಸಿಟಿ ಕ್ಲಸ್ಟರ್ ಅಧ್ಯಕ್ಷ ಎನ್.ಕೆ.ಅಬೂಬಕರ್, ಮಂಗಳೂರು ವಲಯ ವರ್ಕಿಂಗ್ ಕಾರ್ಯದರ್ಶಿ ಹಾರಿಸ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆಯ ಕಾರ್ಯದರ್ಶಿ  ಅಫ್ಸರ್ ಭಾಷಾ ಉಪಸ್ಥಿತರಿದ್ದರು.

ಶಂಸುದ್ದೀನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News