ಕುನಾಲ್ ಕಾಮ್ರಾ ಮೇಲಿನ ನಿಷೇಧ ವಿರೋಧಿಸಿ ಪ್ರಯಾಣಿಕರಿಂದ ಇಂಡಿಗೋ ವಿಮಾನದೊಳಗೆ ಹೀಗೊಂದು ಪ್ರತಿಭಟನೆ...

Update: 2020-02-08 09:35 GMT
Photo: facebook.com/jhamunna

ಹೊಸದಿಲ್ಲಿ: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ವಿಮಾನದಲ್ಲಿ ಪ್ರಶ್ನೆಗಳನ್ನು ಕೇಳಿದ ಕುನಾಲ್ ಕಾಮ್ರಾ ಅವರ ಮೇಲೆ ಇಂಡಿಗೋ ಹೇರಿದ ನಿಷೇಧವನ್ನು ಪ್ರತಿಭಟಿಸಿ ಪ್ರಯಾಣಿಕರ ಗುಂಪೊಂದು ಇಂಡಿಗೋ ವಿಮಾನದೊಳಗೆ  ಬ್ಯಾನರ್ ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ. ಈ ಕುರಿತ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಾರಣಾಸಿ-ದಿಲ್ಲಿ ನಡುವೆ ಸಂಚರಿಸುವ ಇಂಡಿಗೋ ವಿಮಾನದಲ್ಲಿ ಈ ವಿನೂತನ ಪ್ರತಿಭಟನೆ ನಡೆದಿದ್ದು "ಕುನಾಲ್ ಕಾಮ್ರಾ ಮೇಲೆ ಇಂಡಿಗೋ ಹೇರಿದ  ನಿಷೇಧ ಖಂಡಿಸುತ್ತೇವೆ'' ಎಂದು ಪೋಸ್ಟರುಗಳಲ್ಲಿ ಬರೆಯಲಾಗಿತ್ತು.

ಇಂಡಿಗೋ ಹೊರತಾಗಿ ಏರ್ ಇಂಡಿಯಾ, ಸ್ಪೈಸ್ ಜೆಟ್ ಹಾಗೂ ಗೋ ಏರ್ ಕೂಡ ಕುನಾಲ್ ಮೇಲೆ ನಿರ್ಬಂಧ ವಿಧಿಸಿದ್ದವು. ಕುನಾಲ್ ಈಗಾಗಲೇ ಇಂಡಿಗೋ ವಿರುದ್ಧ ಮೊಕದ್ದಮೆ ದಾಖಲಿಸಿ ರೂ. 25 ಲಕ್ಷ ಪರಿಹಾರ ಕೋರಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News