​ಮಾರಿಪ್ಪಳ್ಳ: ಜಾಮಿಯಾ ಇರ್ಫಾನಿಯಾ ಪ್ರಚಾರ ಸಭೆ

Update: 2020-02-10 18:30 GMT

ಫರಂಗಿಪೇಟೆ:  ಜಾಮಿಯಾ ಇರ್ಫಾನಿಯಾ ಶಿಕ್ಷಣ ಸಂಸ್ಥೆಯ 28ನೇ ವಾರ್ಷಿಕ ಮಹಾ ಸಮ್ಮೇಳನ  ಮತ್ತು 20 ನೇ ಸನದುದಾನ ಕಾರ್ಯಕ್ರಮ ಫೆ 20 ರಿಂದ 24 ರವರೆಗೆ ಚಪ್ಪಾರಪಡವಿನಲ್ಲಿ ಜರಗಲಿದೆ. ಇದರ ಅಂಗವಾಗಿ ಮೌಲ ಮೆಮೋರಿಯಲ್ ಅಕಾಡಮಿ ಜಲಾಲಿಯ ನಗರ ಪೇರಿಮಾರ್ ಪುದುವಿನಲ್ಲಿ ಪ್ರಚಾರ ಸಭೆ ನಡೆಯಿತು.

ಮುಖ್ಯ ಭಾಷಣ ಮಾಡಿದ ಸಮಸ್ಥ ಕೇರಳ ಸುನ್ನಿ ಯುವಜನ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಮಾತನಾಡಿದರು, ಜಾಮಿಯಾ ಇರ್ಫಾನಿಯಾ ಪ್ರೊ. ಅಸ್ಸಯ್ಯದ್ ಮೊಹಮ್ಮದ್ ಶೆರೀಫ್ ತಂಙಳ್ ಇರ್ಫಾನಿ ಮಖ್ಡುಮಿ ದುವಾ ನೆರವೇರಿಸಿದರು. ಮೌಲ ಮೆಮೋರಿಯಲ್ ಅಕಾಡಮಿ ಅಧ್ಯಕ್ಷ ಹಾಜಿ ಕೆಬಿ ಅಬ್ದುಲ್ ರಝಾಕ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿದ್ದರು. ಇರ್ಫಾನಿಯ ದವಾ ಸಂಘ ಕೇಂದ್ರ ಸಮಿತಿ ಅಧ್ಯಕ್ಷ ಶರೀಫ್ ಫೈಝಿ ಇರ್ಫಾನಿ ಉದ್ಘಾಟಿಸಿದರು.

ಎಂಎಂಎ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ, ಮಾರಿಪ್ಪಳ್ಳ ಮಸೀದಿ ಖತೀಬ್ ಖಲುರ್ರಹ್ಮಾನ್ ದಾರಿಮಿ, ಸುನ್ನಿ ಮಹಲ್ ಫೆಡರೇಷನ್ ಅಧ್ಯಕ್ಷ ಇರ್ಷಾದ್ ದಾರಿಮಿ, ಕಲ್ಲಡ್ಕ ಮಸೀದಿ ಮುದರ್ರಿಸ್ ಶೈಖ್ ಮೊಹಮ್ಮದ್ ಫೈಝಿ ಇರ್ಫಾನಿ, ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ, ಅಧ್ಯಕ್ಷ ಮೊಹಮ್ಮದ್ ಬಾವ,  ಅಮೆಮ್ಮಾರ್ ಮಸೀದಿ ಖತೀಬ್ ಅಬ್ದುಲ್ ಲತಿಫ್ ಹನೀಫಿ, ಅಧ್ಯಕ್ಷ ಉಮರಬ್ಬ,  ತುಂಬೆ ಮಸೀದಿ ಖತೀಬ್ ಲತೀಫ್ ಫೈಝಿ, ಮಾರಿಪ್ಪಳ್ಳ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್, ಹತ್ತನೆಮೈಲ್ ಕಲ್ಲು ಮಸೀದಿ ಅಧ್ಯಕ್ಷ ಮೊಹಮ್ಮದ್ ಆಲಿ, ಅರ್ಕುಳ ಮಸೀದಿ ಅಧ್ಯಕ್ಷ ಸಾಜಿದ್ ಒಡೆಯರ್, ಎಸ್ಕೆಎಸ್ಎಸ್ಎಫ್ ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ಎಕೆ ಅಬ್ದುಲ್ ಖಾದರ್, ಎಮ್ಎಮ್ಎ ಉಪಾಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು.

ಸವಾದ್ ಫೈಝಿ ಇರ್ಫಾನಿ ಸ್ವಾಗತಿಸಿದರು.  ಕಮರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News