ಗೆಲುವು ದೇಶಕ್ಕೆ ಅರ್ಪಣೆ: ಕೇಜ್ರೀವಾಲ್

Update: 2020-02-11 15:51 GMT

ಹೊಸದಿಲ್ಲಿ, ಫೆ.11: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬೃಹತ್ ಜನಾದೇಶದೊಂದಿಗೆ ಅಧಿಕಾರದ ಗದ್ದುಗೆ ಪಡೆದಿರುವ ಆಮ್ ಆದ್ಮಿ ಪಕ್ಷದ ಗೆಲುವನ್ನು ದೇಶಕ್ಕೆ ಅರ್ಪಿಸುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಫಲಿತಾಂಶ ಘೋಷಣೆಯಾದ ಬಳಿಕ ‘ಐ ಲವ್ ಯು ’ ಎಂದು ದಿಲ್ಲಿ ಜನತೆಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್, ಈ ಗೆಲುವಿಗಾಗಿ ದಿಲ್ಲಿಯ ಜನತೆಗೆ, ಪತ್ನಿಗೆ ಹಾಗೂ ಹನುಮಾನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2015ರಂತೆಯೇ ಈ ಬಾರಿಯೂ ಫೆ.14ರಂದೇ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಕೇಜ್ರೀವಾಲರ ಪತ್ನಿ ಸುನೀತಾ, ಇಬ್ಬರು ಮಕ್ಕಳು, ಆಪ್ ಮುಖಂಡರಾದ ರಾಘವ ಚಡ್ಡಾ, ಸಂಜಯ್ ಸಿಂಗ್, ಕೈಲಾಶ್ ಗೆಹ್ಲೋಟ್ ಮತ್ತಿತರರು ಪಾಲ್ಗೊಂಡಿದ್ದರು. ಬಳಿಕ ಮಿಂಟೋ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಕನ್ನಾಟ್‌ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರದವರೆಗೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಅರವಿಂದ್ ಕೇಜ್ರೀವಾಲ್ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News