ಕಂದಾವರಪದವು ಅಲ್ ಮಸ್ಜಿದುಲ್ ಬದ್ರಿಯಾ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಬಶೀರ್ ಆಯ್ಕೆ

Update: 2020-02-15 05:56 GMT
ಅಬ್ದುಲ್ ಬಶೀರ್

ಗುರುಪುರ/ಕೈಕಂಬ: ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಪದವು ಕೈಕಂಬ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷ ಕೆ. ಎಮ್. ಬಾವರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಬಶೀರ್ ಮೆಗಾ ಪ್ಲಾಝಾ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕಲ್ಪನೆ ಕೋಶಾಧಿಕಾರಿ ಚಾಯಬ್ಬ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಹಾಜಿ ಹಮ್ಮಬ್ಬ ಲಿಮ್ರ. ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮೆಗಾ ಪ್ಲಾಝಾ, ಸಿನಾನ್ ಶೀಬಾ, ಲೆಕ್ಕ ಪರಿಶೋಧಕರಾಗಿ ಕೆ. ಇಬ್ರಾಹಿಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ವೆನ್ಝ್ ಕೆ. ಅಬ್ದರ್ರಹ್ಮಾನ್ ಮೂನ್ಲೈಟ್, ಎಂ. ಎಸ್ ಹಸನಬ್ಬ, ಹನೀಫ್ ಮಟ್ಟಿಕ್ಕುಳ, ಫಾರೂಖ್ ಶಿರ್ತಾಡಿ, ಉಬೈದ್ ಕಲ್ಪನೆ. ಫಾರೂಖ್ ಶೀಬಾ ,ರಫೀಕ್ ಪಿ.ಎಚ್., ಎನ್.ಎಚ್. ಹಸನಬ್ಬ ನೇಮಕಗೊಂಡರು.

ಗೌರವಾಧ್ಯಕ್ಷರಾಗಿ ಸತತ 6ನೇ ಬಾರಿಗೆ ಕೆ. ಎಮ್. ಬಾವ ನೇಮಕ ಗೊಂಡರು.

ಹನೀಫ್ ಕಂದಾವರ ಸ್ವಾಗತಿಸಿ, ನೂತನ ಕಾರ್ಯದರ್ಶಿ ಇಬ್ರಾಹಿಂ ಕಲ್ಪನೆ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News