ಉಳ್ಳಾಲ ದರ್ಗಾಕ್ಕೆ ಎಪಿ ಅಬೂಬಕರ್ ಮುಸ್ಲಿಯಾರ್ ಭೇಟಿ

Update: 2020-02-15 14:14 GMT

ಉಳ್ಳಾಲ:  ಸಯ್ಯದ್ ಮದನಿ ಉಳ್ಳಾಲ ದರ್ಗಾ ಝಿಯಾರತ್ ಗಾಗಿ ಶನಿವಾರ ಭೇಟಿ ನೀಡಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ದರ್ಗಾ ಅಧ್ಯಕ್ಷ  ರಶೀದ್ ಹಾಜಿ ಬರಮಾಡಿಕೊಂಡರು.

ನಂತರ ಮಾತನಾಡಿದ ಅವರು, ಜನರಿಗೆ ಎದುರಾಗಿರುವ ಆಪತ್ತುಗಳಿಂದ ರಕ್ಷಣೆ ಹೊಂದಲು ಪ್ರಾರ್ಥಿಸಬೇಕು. ಎಪ್ರಿಲ್ ನಲ್ಲಿ ಮರ್ಕಝ್ ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ದರ್ಗಾ ಸಮಿತಿ, ಜಮಾತ್ ಸದಸ್ಯರೆಲ್ಲರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು ‌.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಅವರು ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಸಕ ಯು ಟಿ ಖಾದರ್, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಮುಮ್ತಾಝ್ ಅಲಿ, ಉಳ್ಳಾಲ ದರ್ಗಾ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಉಪಾಧ್ಯಕ್ಷ ಯು.ಕೆ. ಮೋನು, ಬಾವ ಮುಹಮ್ಮದ್, ಕಾರ್ಯದರ್ಶಿ ನೌಶಾದ್ ಅಲಿ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆತೋಟ, ಸದಸ್ಯ ವಿ.ಸಿ.ಖಾಸಿಂ, ಅಬ್ದುಲ್ ರಹಿಮಾನ್, ಮಾಜಿ ಸದಸ್ಯ ಅಹ್ಮದ್ ಬಾವ ಕೊಟ್ಟಾರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News