ಎಸ್.ವೈ.ಎಸ್. ಮತ್ತು ಎಸ್ಸೆಸ್ಸೆಫ್ ಮೇಲಂಗಡಿ: ಮುಹಬ್ಬತೇ ಜೀಲಾನಿ ಕಾರ್ಯಕ್ರಮ

Update: 2020-02-15 18:34 GMT

ಉಳ್ಳಾಲ: ಉಳ್ಳಾಲ ಖಾಝಿ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್‍ ಪ್ರಾರ್ಥನೆಯೊಂದಿಗೆ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಮೇಲಂಗಡಿ, ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಮಹಬ್ಬತೇ ಜೀಲಾನಿ ನಸೀಹತ್ ಸಿಲ್‍ಸಿಲಾದ ಪ್ರಯುಕ್ತ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.

11 ದಿವಸದ ಕಾರ್ಯಕ್ರಮದಲ್ಲಿ ನಸೀಹತ್ ಸಿಲ್‍ಸಿಲಾ, ಬೃಹತ್ ಮುರ್ದಾ ಮಜ್ಲಿಸ್, ಮುಹ್ಯದ್ದೀನ್ ಮಾಲೆ ಆಲಾಪಣೆ, ಸೆಯ್ಯಿದ್ ಮದನಿ ಮೌಲಿದ್, ತಾಜುಲ್ ಉಲಮಾ ಮೌಲಿದ್, 2ನೇ ವಾರ್ಷಿಕ ಮಹ್ಳರತುಲ್ ಬದ್ರಿಯ್ಯಾ ಮತ್ತು 3ನೇ ವಾರ್ಷಿಕ ಜಲಾಲಿಯಾ ರಾತೀಬು ಮಜ್ಲಿಸ್ ನಡೆಯಿತು. 

ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದರ ನೇತೃತ್ವದಲ್ಲಿ ಖುತುಬುಝ್ಝಮಾನ್ ಹಝ್ರತ್ ಅಸ್ಸೆಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ದರ್ಗಾ ಝಿಯಾರತ್ ನಡೆಯಿತು. ಯು.ಎಸ್. ಹಂಝ ಹಾಜಿ ಅಳೇಕಲ ಧ್ವಜಾರೋಹಣ ನೆರವೇರಿಸಿದರು. ಸೆಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ, ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮುದುಗುಡ, ರಾಫಿ ಅಹ್ಸನಿ ಕಾಂತಪುರಂ, ಸೆಯ್ಯಿದ್ ಅಸ್ಬುಲ್ಲಾ ಬಾಫಖಿ ತಂಙಳ್ ಕೊಲ್ಲಂ, ಅಬ್ದುಲ್ ಹಕೀಂ ಮದನಿ ಪಾಂಡವರಕಲ್ಲು, ಸೆಯ್ಯಿದ್ ತ್ವಾಹಾ ತಂಙಳ್ ಗಾಣೆಮಾರ್, ಅಸ್‍ಅದ್ ಸಖಾಫಿ ಜುನೈದಿ ತಿರುವಟ್ಟೂರು, ಮುಹಮ್ಮದ್ ಫಾಳಿಲ್ ನೂರಾನಿ ಅಲ್ ಫಾಳಿಲಿ, ಅಬೂ ಸಾಲಿಮ್ ಅಶ್ರಫಿ ಸಖಾಫಿ ಉಳ್ಳಾಲ್, ಮುಹಮ್ಮದ್ ಕುಂಞಿ ಅಮ್ಜದಿ ಉಪಸ್ಥಿತರಿದ್ದರು.

ಶಾಖಾಧ್ಯಕ್ಷ ಬಶೀರ್ ಸಖಾಫಿ ಸ್ವಾಗತಿಸಿ ಬ್ರಾಂಚ್ ಕಾರ್ಯದರ್ಶಿ ಖಾದರ್ ಜೀಲಾನಿ ನಿರೂಪಿಸಿದರು . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News