ಫೆ.25: ಸಿಎಎ, ಎನ್.ಆರ್.ಸಿ. ವಿರುದ್ಧ ಕುದ್ರೋಳಿಯಲ್ಲಿ ಪ್ರತಿಭಟನೆ

Update: 2020-02-16 04:57 GMT

ಮಂಗಳೂರು, ಫೆ.16: ಸಿಎಎ, ಎನ್.ಆರ್.ಸಿ. ಎನ್.ಪಿ.ಆರ್. ವಿರುದ್ಧ ಕುದ್ರೋಳಿ ಆಸುಪಾಸಿನ 5 ಜುಮಾ ಮಸೀದಿಗಳ ಆಡಳಿತದ ನೇತೃತ್ವದ ಮುಸ್ಲಿಂ ಐಕ್ಯ ವೇದಿಕೆಯ ಆಶ್ರಯದಲ್ಲಿ ಫೆ.25ರಂದು ಅಪರಾಹ್ನ 2 ಗಂಟೆಗೆ ಕುದ್ರೋಳಿಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಯಲ್ಲಿ  ಮೈಸೂರಿನ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೆಂಗಳೂರಿನ ರಾ ಚಿಂತನ್ ಹಾಗೂ ಬಿ.ಆರ್.ಭಾಸ್ಕರ್ ಪ್ರಸಾದ್, ನಜ್ಮಾ ನಝೀರ್  ಪ್ರಮುಖ ಭಾಷಣ ಮಾಡಲಿರುವರು. ವಿವಿಧ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸುವರು.

ಪ್ರತಿಭಟನೆಯ ಯಶಸ್ಸಿಗಾಗಿ ಸುಮಾರು 60 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರಮುಖರನ್ನೊಳಗೊಂಡ ಸಭೆಯು ಇತ್ತೀಚೆಗೆ ನಡೆಯಿತು. ಸಮಿತಿಯ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್, ಕಾರ್ಪೊರೇಟರ್ ಶಂಸುದ್ದೀನ್ ಎಚ್.ಬಿ.ಟಿ., ಬಿ.ಅಬೂಬಕರ್ ಸಹಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News