ಜಯಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರ ರಾಜ್ಯಮಟ್ಟದ ಸಮ್ಮೇಳನ

Update: 2020-02-17 15:41 GMT

ಉಡುಪಿ, ಫೆ.17: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೋಟೆಲ್ ಹಾಲ್ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಜಯಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರ ಎರಡು ದಿನಗಳ ಸಮ್ಮೇಳನವನ್ನು ಜಯಂಟ್ಸ್ ಇಂಟರ್‌ನ್ಯಾಷನಲ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ದಿನಕರ ಅಮೀನ್, ಒಂದು ಸಂಸ್ಥೆ ಉತ್ತಮ ಬೆಳವಣಿಗೆ ಮಾಜಿ ಅಧ್ಯಕ್ಷರು ಪಾತ್ರ ಮಹತ್ವವಾದದು. ಅವರು ಸಂಸ್ಥೆಯ ಬೆನ್ನುಲುಬಾಗಿದ್ದು ನಿರಂತರ ಸಹಕಾರ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಜಯಂಟ್ಸ್ ಇಂಟರ್‌ನ್ಯಾಷನಲ್ ವಿಶೇಷ ಕಮಿಟಿ ಸದಸ್ಯ ಜಯಕೃಷ್ಣನ್ ತಮಿಳುನಾಡು, ಮೋಹನ್ ಕರೆಕಾರ್ ಬೆಳಗಾವಿ, ಸಮ್ಮೇಳನ ಅಧ್ಯಕ್ಷ ತೇಜಶ್ವರ ರಾವ್, ವಲಯ ನಿರ್ದೇಶಕ ರಮೇಶ ಪೂಜಾರಿ, ಉಡುಪಿ ಸಂಸೆಯ ಸ್ಥಾಪಕ ಅಧ್ಯ ವೇಣುಗೋಪಾಲ್ ಉಪಸ್ಥಿತರಿದ್ದರು.

ಚಿತ್ರಕಲೆಯಲ್ಲಿ ವಿಶೇಷ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ಕಲಾವಿದ ಲಿಯಾಖತ್ ಅಲಿ ಕುಂಜಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಉಡುಪಿ ಗ್ರೂಪಿನ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್ ಸ್ವಾಗತಿಸಿದರು. ಕಾರ್ಯದಶಿರ್ ಯಶವಂತ ಸಾಲಿಯಾನ್ ವಂದಿಸಿದರು. ಮಧುಸೂದನ್ ಹೇರೂರು ಹಾಗೂ ಗಣೇಶ್ ಉರಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News