ಹೆಚ್‌ಐವಿ ಸೋಂಕಿತರಿಗೆ ನಿವೇಶನ ಒದಗಿಸಲು ಆದ್ಯತೆ ನೀಡಿ: ಪ್ರೀತಿ ಗೆಹ್ಲೋಟ್ ಸೂಚನೆ

Update: 2020-02-17 16:58 GMT

ಉಡುಪಿ, ಫೆ.17: ಜಿಲ್ಲೆಯ ಹೆಚ್‌ಐವಿ ಸೋಂಕಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಸಹಯೋಗದಲ್ಲಿ ವಸತಿ ಕಲ್ಪಿಸಲು ಅವಕಾಶವಿದ್ದು, ಅವರಿಗೆ ಆದ್ಯತೆಯ ಮೇರೆಗೆ ನಿವೇಶನ ಒದಗಿಸಲು ಸಂಬಂದಪಟ್ಟ ಇಲಾಖೆಗಳು ಕ್ರಮ ವಹಿಸುವಂತೆ ಉಡುಪಿ ಜಿಪಂ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಸೂಚಿಸಿದ್ದಾರೆ.

ಸೋಮವಾರ ಜಿಪಂನ ತಮ್ಮ ಕಚೇರಿಯಲ್ಲಿ ನಡೆದ ಹೆಚ್‌ಐವಿ ಸೋಂಕಿತರಿಗೆ ವಿವಿಧ ಇಲಾಖೆಗಳಿಂದ ಸೌಲ್ಯಗಳನ್ನು ಒದಗಿಸಿರುವ ಕುರಿತ ಸಾಮಾಜಿಕ ಸವಲತ್ತುಗಳ ಸಮನ್ವಯ ಸಮಿತಿ ಸಭೆಯ ಅಧ್ಯ್ಷತೆ ವಹಿಸಿ ಅವರು ಮಾತನಾಡಿದರು.

ರಾಜೀವ ಗಾಂಧೀ ವಸತಿ ನಿಗಮದಲ್ಲಿ ಹೆಚ್‌ಐವಿ ಸೋಂಕಿತರಿಗೆ ವಸತಿ ಒದಗಿಸಲು ಅವಕಾಶವಿದ್ದರೂ ಸಹ ಜಿಲ್ಲೆಯಲ್ಲಿ, 2014-15ರಲ್ಲಿ ನಿಗಮದಿಂದ 162 ಗುರಿ ನೀಡಿದ್ದು, 36 ಮಂದಿಗೆ ಮಾತ್ರ ವಸತಿ ಸೌಲ್ಯ ಒದಗಿಸಲಾಗಿದೆ. 2016-17ರಲ್ಲಿ 20 ಗುರಿ ಇದ್ದು    9 ಮಂದಿಗೆ ಸೌಲ್ಯ ಒದಗಿಸಲಾಗಿದೆ. 2017-18ರಲ್ಲಿ 33 ಗುರಿ ಇದ್ದು 4 ಮಂದಿಗೆ ಸೌಲ್ಯ ಒದಗಿಸಲಾಗಿದೆ. ವಸತಿ ಕಲ್ಪಿಸಲು ಗುರಿ ಇದ್ದರೂ ಸಹ ನಿವೇಶನ ಇಲ್ಲದ ಕಾರಣ ಅವರಿಗೆ ವಸತಿ ಸೌಲ್ಯ ಒದಗಿಸಲು ತೊಂದರೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿನ ಹೆಚ್‌ಐವಿ ಸೋಂಕಿತರಿಗೆ, ಸಂಬಂದಪಟ್ಟ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರರ ಮೂಲಕ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಓ ಸೂಚಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ 2008ರಿಂದ ಜನವರಿ 2020ರವರೆಗೆ ಒಟ್ಟು 4,00,386 ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, 7,752 ನೊಂದಾಯಿತ ಹೆಚ್‌ಐವಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಗರ್ಭಿಣಿಯರಲ್ಲಿ 245 ಹೆಚ್‌ಐವಿ ಪಾಸಿಟಿವ್, 203 ಹೆಚ್‌ಐವಿ ಸೋಂಕಿತ ಮಕ್ಕಳು ಹಾಗೂ 7 ಮಂಗಳಮುಖಿಯಲ್ಲಿ ಹೆಚ್‌ಐವಿ ಸೋಂಕು ಪ್ರಕರಣ ದಾಖಲಾಗಿರುವ ಕುರಿತು ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ಆರ್‌ಟಿಓ ಹಾಗೂ ಕೆನರಾ ಬಸ್ ಮಾಲಕ ಸಂಘದ ಸಹಕಾರದಿಂದ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಹೆಚ್‌ಐವಿ ಸೋಂಕಿತರಿಗೆ ಶೇ.50 ರಿಯಾಯತಿ ದರದ ಬಸ್‌ಪಾಸ್ ಕಲ್ಪಿಸಲಾಗಿದೆ. 2010ರಿಂದ 2016ರ ಮಾರ್ಚ್ 31ರವರೆಗೆ 636 ಅರ್ಜಿಗಳು ಬಂದಿದ್ದು, ಎಲ್ಲಾ ಪಲಾನುವಿಗಳು ಬಸ್‌ಪಾಸ್ ಸೌಲ್ಯವನ್ನು ಪಡೆದಿದ್ದಾರೆ.

2017ರಲ್ಲಿ 27 ಅರ್ಜಿ ಬಂದಿದ್ದು, ಎಲ್ಲಾ ಫಲಾನುವಿಗಳು ಬಸ್‌ಪಾಸ್ ಸೌಲ್ಯವನ್ನು ಪಡೆದಿದ್ದಾರೆ. 2017ರಿಂದ 2018 ರಲ್ಲಿ 45 ಅರ್ಜಿಗಳಲ್ಲಿ 19 ಪಲಾನುವಿಗಳು ಬಸ್‌ಪಾಸ್ ಸೌಲ್ಯವನ್ನು ಪಡೆದಿದ್ದಾರೆ. 2019ರಲ್ಲಿ 53 ಅರ್ಜಿ ಬಂದಿದ್ದು, ಎಲ್ಲಾ ಪಲಾನುವಿಗಳು ಬಸ್‌ಪಾಸ್ ಸೌಲ್ಯವನ್ನು ಪಡೆದಿದ್ದಾರೆ. 2020ಯಲ್ಲಿ 54 ಅರ್ಜಿಗಳು ಬಂದಿದ್ದು, 27 ಪಲಾನುವಿಗಳು ಬಸ್‌ಪಾಸ್ ಸೌಲ್ಯವನ್ನು ಪಡೆದಿರುವ ಕುರಿತು ಮಾಹಿತಿ ಪಡೆದ ಸಿಇಓ ಅವರು ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರದಲ್ಲಿ ಪರಿಗಣಿಸಿ ಫಲಾನುವಿ ಗಳಿಗೆ ನೀಡುವಂತೆ ಸೂಚಿಸಿದರು.

ಹೆಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಉಡುಪಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಸಿಗುವ ವಿಶೇಷ ಪಾಲನಾ ಯೋಜನಾ ವರದಿಯನ್ನು ಅಧಿಕಾರಿಗಳಿಂದ ಪಡೆದ ಅವರು, 2012 ರಿಂದ ಪ್ರಸಕ್ತ ಸಾಲಿನ ವರೆಗಿನ ವರದಿಯನ್ನು ಸಮಗ್ರವಾಗಿ ದಾಖಲಿಸುವಂತೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆ ಯಡಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹೆಚ್‌ಐವಿ ಸೋಂಕಿತ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ತರಬೇತಿಯನ್ನು ನೀಡಿ ಶೇ. 50 ಸಬ್ಸಿಡಿಯ ಸಾಲವನ್ನು ನೀಡಲಾಗುತ್ತಿದೆ. 2019-20ರಲ್ಲಿ ಈ ಯೋಜನೆ ಯಡಿ 21 ಗುರಿ ನೀಡಿದ್ದು, 19 ಪಲಾನುವಿಗಳಿಗೆ ಸೌಲ್ಯ ದೊರೆತಿದೆ. ಈ ಯೋಜನೆಯ ಸೌಲ್ಯ ಎಲ್ಲಾ ಪಲಾನುವಿಗಳಿಗೆ ಸಿಗುವಂತಾಗಬೇಕು ಎಂದು ಪ್ರೀತಿ  ತಿಳಿಸಿದರು.

ಜಿಲ್ಲೆಯ ಹೆಚ್‌ಐವಿ ಸೋಂಕಿತ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಹೈಜಿನ್ ಕಿಟ್ ಒದಗಿಸಲಾಗುತ್ತಿದ್ದು, 2019-2020ರಲ್ಲಿ ಸ್ವಯಂ ಸೇವಾ ಸಂಘಟನೆಗಳ ಸಹಕಾರದಿಂದ ಮಕ್ಕಳಿಗೆ ಸಿರಪ್‌ಗಳನ್ನು ಒದಗಿಸಲಾಗುತ್ತಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹೆಚ್‌ಐವಿ ಸೋಂಕಿತರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಿಇಓ, ಹೆಚ್‌ಐವಿ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಿಂದ ಒದಗಿಸುವ ಸಿಡಿ4 ಹಾಗೂ ವೈರಲ್ ಲೋಡ್ ಪರೀಕ್ಷೆ, ಆಯುಷ್ಮಾನ್ ಕಾರ್ಡ್ ವಿತರಣೆ, ಎರಡನೇ ಹಂತದ ಎಆರ್‌ಟಿ ಮತ್ತು ಮಕ್ಕಳಿಗೆ ಪ್ರಯಾಣ ಅನುದಾನ ಒದಗಿಸುವಿಕೆ ಹಾಗೂ ಉಚಿತ ಎಆರ್‌ಟಿ ಔಷಧ ಮತ್ತು ಲ್ಯಾಬ್ ಸರ್ವೀಸಸ್, ಉಚಿತ ಪೂರಕ ಔಷಧಗಳ ಬಗ್ಗೆ ವಿವರ ಪಡೆದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News