ಪ್ರವಾದಿ ನಿಂದನೆ: ಮಧುಗಿರಿ ಮೋದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು

Update: 2020-02-18 09:44 GMT

ಬೆಳ್ತಂಗಡಿ: ಪ್ರವಾದಿ ಮುಹಮ್ಮದ್ (ಸ) ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಧರ್ಮ ನಿಂದನೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ  ಮಧುಗಿರಿ ಮೋದಿ ವಿರುದ್ಧ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ‌ದೂರು ದಾಖಲಿಸಲಾಯಿತು.

ಠಾಣಾಧಿಕಾರಿ ನಂದಕುಮಾರ್‌ ಅವರನ್ನು ಭೇಟಿ‌ ಮಾಡಿದ ನಿಯೋಗ ಮನವಿ ಸಲ್ಲಿಸಿ, ಕಠಿಣ ಕಾನೂನು ಕ್ರಮ‌ಕ್ಕೆ ಒತ್ತಾಯಿಸಿತು.

ಈ ಸಂದರ್ಭ ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ. ಶರೀಫ್ ಬೆರ್ಕಳ, ಗುರುವಾಯನಕೆರೆ ಸೆಕ್ಟರ್ ಕಾರ್ಯದರ್ಶಿ ಪಯಾಝ್ ಗೇರುಕಟ್ಟೆ, ಕೋಶಾಧಿಕಾರಿ ಅಬ್ದುಲ್ ನಾಸರ್ ಸುನ್ನತ್ ‌‌‌ಕೆರೆ, ಸೆಕ್ಟರ್ ನಾಯಕರಾದ ನಾಸಿರ್ ಜಾರಿಗೆಬೈಲು, ರವೂಫ್ ಮದ್ದಡ್ಕ, ಹಾರಿಸ್ ಅಹ್ಮದ್ ಪರಪ್ಪು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News