"ಯಾರಿಗಾದರೂ ಹೊಡೆಯುವ ವಿಚಾರ ಬಂದಾಗ...'': ವಿವಾದ ಸೃಷ್ಟಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಹೇಳಿಕೆ

Update: 2020-02-18 10:10 GMT

ಪಠಾಣ್‍ಕೋಟ್ : "ಯಾರಿಗಾದರೂ ಹೊಡೆಯುವ ವಿಚಾರದಲ್ಲಿ ನನಗೆ ಸರಿಸರಿಮಾನರು ಯಾರೂ ಇಲ್ಲ'' ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ನಟ-ರಾಜಕಾರಣಿ ಸನ್ನಿ ಡಿಯೋಲ್ ಅವರನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ.

"ರಾಜ್ಯ ಸರಕಾರಿ ಉದ್ಯೋಗಿಗಳು ಜನರಿಗೆ ಕಿರುಕುಳ ನೀಡಿ ಅವರು ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆಂದು ಹೇಳುತ್ತಿದ್ದಾರೆಂದು ನನಗೆ ತಿಳಿದು ಬಂದಿದೆ. ಇಂತಹ ಸಣ್ಣಪುಟ್ಟ ವಿಚಾರಗಳಲ್ಲಿ ನಾನು ಹಸ್ತಕ್ಷೇಪ ನಡೆಸುವುದಿಲ್ಲ. ಆದರೆ ಯಾರಿಗಾದರೂ ಹೊಡೆಯುವ ವಿಚಾರದಲ್ಲಿ ನನಗೆ ಸರಿಸಮಾನರು ಯಾರೂ ಇಲ್ಲ'' ಎಂದು ಗುರುದಾಸಪುರ್ ಬಿಜೆಪಿ ಸಂಸದರಾಗಿರುವ ಸನ್ನಿ ಇತ್ತೀಚೆಗೆ ಪಠಾಣ್‍ ಕೋಟ್‍ ನಲ್ಲಿ ನಡೆದ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು.

ನಟನೊಬ್ಬನನ್ನು ನಾಯಕನನ್ನಾಗಿಸಲು ಆಯ್ಕೆ ಮಾಡಿರುವುದು ಬಿಜೆಪಿಯದ್ದೇ ತಪ್ಪು ಎಂದು  ಇದಕ್ಕೆ ಪ್ರತಿಕ್ರಿಯಿಸಿದ  ಭೋವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೊಗಿಂದರ್ ಪಾಲ್ ಹೇಳಿದ್ದಾರೆ.

"ಸನ್ನಿ ಡಿಯೋಲ್ ಅವರ ತಪ್ಪೇನಿಲ್ಲ, ಅವರಿಗೆ ರಾಜಕೀಯದ ಜ್ಞಾನವಿಲ್ಲ. ಅದು ಬಿಜೆಪಿಯ ತಪ್ಪು. ರಾಜಕಾರಣಕ್ಕೆ ಬರಲು ಅವರಿಗೆ ಯಾರು ಬಲವಂತಪಡಿಸಿದರೆಂದು ನನಗೆ ತಿಳಿದಿಲ್ಲ. ಅವರು ಹಿಂದೆ ಸಿನೆಮಾಗಳಲ್ಲಿ ಡ್ಯಾನ್ಸ್ ಮಾಡಿದಂತೆ ಈಗ ಡ್ಯಾನ್ಸ್ ಮಾಡುತ್ತಿದ್ದಾರೆ'' ಎಂದು ಪಾಲ್ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

ಕಳೆದ ತಿಂಗಳಷ್ಟೇ ಸನ್ನಿ ಡಿಯೋಲ್ ಅವರ `ನಾಪತ್ತೆ ಸಂಸದ' ಪೋಸ್ಟರ್‍ ಗಳು ಪಠಾಣ್‍ ಕೋಟ್ ರೈಲ್ವೆ ನಿಲ್ದಾಣದ ಸಮೀಪ ಕಾಣಿಸಿಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News