ಎಪ್ರಿಲ್ 5ರಂದು ಡಿ.ಕೆ.ಎಸ್.ಸಿ.ಯಿಂದ ರಾಜ್ಯಮಟ್ಟದ ಕುರ್‌ಆನ್ ಹಿಫ್ಲ್ ಸ್ಪರ್ಧೆ

Update: 2020-02-20 08:20 GMT

ಮಂಗಳೂರು, ಫೆ.20: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿ.ಕೆ.ಎಸ್.ಸಿ.) ಮಂಗಳೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ
ಎಪ್ರಿಲ್ 5ರಂದು ರಾಜ್ಯಮಟ್ಟದ ಕುರ್‌ಆನ್ ಹಿಫ್ಲ್ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರಿನ ಪುರಭವನದಲ್ಲಿ ವಡೆಯುವ ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ.50,000, ದ್ವಿತೀಯ 25,000 ಹಾಗೂ ತೃತೀಯ 15,000 ರೂ. ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಗಂಡು ಮಕ್ಕಳಿಗೆ ಮಾತ್ರ ಅವಕಾಶ, ಸ್ಪರ್ಧಾಳು ಸುನ್ನತ್ ಜಮಾಅತಿನ ಸಂಸ್ಥೆಯಲ್ಲಿ ಕಲಿತವರಾಗಿದ್ದು, ವಯೋಮಿತಿಯು 7ರಿಂದ 20 ವರ್ಷದೊಳಗಿನವರಾಗಿರತಕ್ಕದ್ದು.

ಆಸಕ್ತ ಅರ್ಹರು ಮಾರ್ಚ್ 15ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಸಂಸ್ಥೆಯ ಕಚೇರಿ ವಿಳಾಸ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಅಲ್ ರಹಬಾ ಪ್ಲಾಝಾ, ಮೂರನೇ ಮಹಡಿ, ಸ್ಟೇಟ್ ಬ್ಯಾಂಕ್ ಹತ್ತಿರ ಮಂಗಳೂರು 575001 ಇಲ್ಲಿಗೆ ಅಂಚೆ ಮೂಲಕ  ಅಥವಾ ಇಮೇಲ್ sgb@dksconline.com, ವಾಟ್ಸ್ಯಾಪ್ ನಂ. 9901626525 ಕಳುಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0824- 4117358 ಮೊಬೈಲ್ ಸಂ: 9901149154, 7619467805 ಅಥವಾ 7349548308 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News