ಉಡುಪಿ: ಶಾಹಿನ್ ಬಾಗ್ ಮಾದರಿಯ ಧರಣಿಗೆ ಪೊಲೀಸ್ ಅನುಮತಿ ನಿರಾಕರಣೆ

Update: 2020-02-22 09:25 GMT

ಉಡುಪಿ: ಸಂವಿಧಾನ ಸಂರಕ್ಷಕ ಸಮಿತಿ ನೇತೃತ್ವದಲ್ಲಿ ಸಿಎಎ, ಎನ್ಆರ್ ಸಿ ಮತ್ತು ಎನ್ ಪಿಆರ್ ವಿರೋಧಿಸಿ ಉಡುಪಿಯಲ್ಲಿ ಇಂದು ನಡೆಸಲು ಉದ್ದೇಶಿಸಲಾಗಿದ್ದ ಶಾಹಿನ್ ಬಾಗ್ ಮಾದರಿಯ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಪೊಲೀಸರ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಇಂದು ಸಂಜೆ ಮಸೀದಿ ರಸ್ತೆಯ ಖಾಸಗಿ ಜಾಗದಲ್ಲಿ ಆರಂಭಗೊಳ್ಳಬೇಕಾದ ಧರಣಿಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು ಆದರೆ ಕೊನೆ  ಕ್ಷಣದಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಇದರ ವಿರುದ್ಧ ಸಂಘಟಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News