ಪೆ. 28 ರಿಂದ ಬೀಡಿ ಗುತ್ತಿಗೆದಾರರ ಮುಷ್ಕರ

Update: 2020-02-25 06:06 GMT

ವಿಟ್ಲ : ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ಬೀಡಿ ಕಂಪೆನಿಗಳ ಮಾಲಕರಿಂದ ಗುತ್ತಿಗೆದಾರರಿಗೆ ಬರಬೇಕಿರುವ ಕಮಿಷನ್ ಹಣ ಪಾವತಿಸುವಂತೆ ಆಗ್ರಹಿಸಿ ಪೆ. 28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ದರಿಸಲಾಗಿದೆ. 

2019 ರ ಎಪ್ರಿಲ್ ನಿಂದ ಬರಬೇಕಿರುವ ಹೆಚ್ಚುವರಿ ಕಮೀಷನ್ ಬಾಕಿ ಇದ್ದು ಪೆ. 21 ರಂದು ಜಿಲ್ಲಾ ಕಾರ್ಮಿಕ ಇಲಾಖಾ ಕಚೇರಿ ಯಲ್ಲಿ ನಡೆದ ಬೀಡಿ ಗುತ್ತಿಗೆದಾರರು ಮತ್ತು ಕಂಪೆನಿಗಳ ಮಾಲಕರ ಸಭೆಯಲ್ಲಿ ಕಮೀಷನ್ ಬಗ್ಗೆ ಚರ್ಚೆ ಆಗದೆ ಸಭೆಯನ್ನು ಮುಂದೂಡಲಾಗಿದೆ. ಈಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News