ದಿಲ್ಲಿಯಲ್ಲಿ ಹಿಂಸಾಚಾರ: ಮಸೀದಿಗೆ ಬೆಂಕಿ ಹಚ್ಚಿ ಹನುಮಾನ್ ಧ್ವಜ ಹಾರಿಸಿದ ದುಷ್ಕರ್ಮಿಗಳು

Update: 2020-12-02 10:12 GMT

ಹೊಸದಿಲ್ಲಿ: ಇಲ್ಲಿನ ಅಶೋಕ್ ನಗರ ದಲ್ಲಿ ದುಷ್ಕರ್ಮಿಗಳ ತಂಡವೊಂದು 'ಜೈಶ್ರೀರಾಮ್', 'ಹಿಂದೂವೋನ್ ಕಾ ಹಿಂದುಸ್ತಾನ್' ಎಂಬ ಘೋಷಣೆಗಳನ್ನು ಕೂಗುತ್ತಾ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಮಸೀದಿಯ ಮಿನಾರದಲ್ಲಿ ಹನುಮಾನ್ ಧ್ವಜವನ್ನು ಹಾರಿಸಿದ್ದಾರೆ.

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮಸೀದಿಯ ಕಾಂಪೌಂಡ್ ಬಳಿಯಿರುವ ಹಲವು ಅಂಗಡಿಗಳನ್ನು ದುಷ್ಕರ್ಮಿಗಳು ಲೂಟಿಗೈದಿದ್ದಾರೆ. ಆದರೆ ಈ ಕೃತ್ಯ ಎಸಗಿದವರು ಸ್ಥಳೀಯರಲ್ಲ ಎಂದು  ಹಿಂದೂ ಬಾಹುಳ್ಯದ ಪ್ರದೇಶವಾದ ಅಶೋಕ್ ನಗರ ನಿವಾಸಿಗಳು ಹೇಳುತ್ತಾರೆ.

ಇಲ್ಲಿ ಕೆಲವೇ ಕೆಲವು ಮುಸ್ಲಿಂ ಕುಟುಂಬಗಳು ವಾಸವಾಗಿವೆ. ಸ್ಥಳದಲ್ಲಿ ಕೆಲವು ಅಗ್ನಿಶಾಮಕ ದಳ ವಾಹನಗಳು ಇದ್ದದ್ದು ಬಿಟ್ಟರೆ , ಪೊಲೀಸರು ಯಾರೂ ಇರಲಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News