ಕನ್ಯಾನ -ಚೆಡವು ದುಲ್ ಪುಖಾರ್ ಸೇವಾ ಸಂಘದ ವಾರ್ಷಿಕೋತ್ಸವ

Update: 2020-02-26 08:14 GMT

ವಿಟ್ಲ, ಫೆ.26: ಬಡ ಮತ್ತು ಅನಾಥರಿಗೆ ಸಹಾಯ ಮಾಡುವುದನ್ನು ಅಲ್ಲಾಹನು ಹೆಚ್ಚು ಇಷ್ಟಪಡುತ್ತಾನೆ  ಮತ್ತು ಪ್ರವಾದಿ (ಸ.ಅ.) ಬಹಳಷ್ಟು ಪ್ರೋತ್ಸಾಹಿಸಿರುವುದರಿಂದ ಬಡ ಮತ್ತು ಅನಾಥರ ಸೇವೆಗೈಯುವರ ಕೈಯನ್ನು ಬಲಪಡಿಸಬೇಕೆಂದು ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಕರೆ ನೀಡಿದ್ದಾರೆ.

  ಕನ್ಯಾನ - ಚೆಡವು ದುಲ್ ಪುಖಾರ್ ಸೇವಾ ಸಂಘದ  20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಕನ್ಯಾನ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್  ದುಆಗೈದರು. ಕನ್ಯಾನ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಜಬ್ಬಾರ್ ಸಖಾಫಿ ಪಾತೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿದರು.

ಸೈಯದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್, ಶೈಖುನಾ ಆಲಿಕುಂಞಿ ಉಸ್ತಾದ್, ಶೈಖುನಾ ಮಾಣಿ ಉಸ್ತಾದ್, ಶಾಸಕ ಯು.ಟಿ. ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News