ಬೈಂದೂರು: ಮರದ ಮೇಲಿಂದ ಬಿದ್ದು ಸಾವು

Update: 2020-02-26 17:17 GMT

ಬೈಂದೂರು, ಫೆ.26: ವ್ಯಕ್ತಿಯೊಬ್ಬರು ಮರದ ಮೇಲೆ ನಿಂತು ಕೊಂಬೆಯನ್ನು ಕಡಿಯುತ್ತಿರುವಾಗ ಕೊಂಬೆ ತುಂಡಾಗಿ ಮರದ ಮೇಲಿಂದ ಬಿದ್ದು ತಲೆಗಾದ ತೀವ್ರ ಸ್ವರೂಪದ ಗಾಯದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಬಡಾಕೆರೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಮೃತರನ್ನು ಹೇರೂರು ಗ್ರಾಮದ ಹೇರಿಕೇರಿ ಬಣಸಾಲಿ ಮನೆಯ ಮಹಾಬಲ ಪೂಜಾರಿ (56)ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಗ್ಗೆ ಬಡಾಕೆರೆಯ ಚಿಕ್ಕಯ್ಯ ಪೂಜಾರಿ ಅವರ ತೋಟಕ್ಕೆ ಕೆಲಸಕ್ಕೆ ತೆರಳಿದ್ದು, 10:30ರ ಸುಮಾರಿಗೆ ತೆಂಗು ಹಾಗೂ ಅಡಿಕೆ ಮರಗಳಿಗೆ ಅಡ್ಡವಾಗಿದ್ದ ಕರಿಹೈಗನ ಮರದ ಮೇಲೆ ನಿಂತು ಕೊಂಬೆಗಳನ್ನು ಕಡಿಯುತ್ತಿರುವಾಗ ಕೊಂಬೆ ತುಂಡಾಗಿ ಮರದ ಮೇಲಿಂದ ಉರುಳಿ ಬಿದ್ದಿದ್ದರು. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯದಿಂದ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News