ದಿಲ್ಲಿ ನೂತನ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕ

Update: 2020-02-28 06:09 GMT

ಹೊಸದಿಲ್ಲಿ, ಫೆ.28: ಹಿರಿಯ ಐಪಿಎಸ್ ಅಧಿಕಾರಿ ಎಸ್‌ಎನ್ ಶ್ರೀವಾಸ್ತವ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ.

ದಿಲ್ಲಿಯಲ್ಲಿ ವಿವಾದಾತ್ಮಕ ಪೌರತ್ವ ಕಾನೂನಿಗೆ ಸಂಬಂಧಿಸಿ ಉಂಟಾದ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯಿಂದ ಶ್ರೀವಾಸ್ತವರನ್ನು ದಿಲ್ಲಿಗೆ ಕರೆಸಿಕೊಂಡಿದ್ದ ಗೃಹ ಸಚಿವಾಲಯ ಅವರನ್ನು ವಿಶೇಷ ಆಯುಕ್ತ(ಕಾನೂನು ಹಾಗೂ ಸುವ್ಯವಸ್ಥೆ)ರನ್ನಾಗಿ ನೇಮಿಸಿತ್ತು. ಶ್ರೀವಾಸ್ತವ ಅವರು ಶನಿವಾರ ನಿವೃತ್ತಿಯಾಗಲಿರುವ ಅಮೂಲ್ಯ ಪಟ್ನಾಯಕ್‌ರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News