ಅಂಕಿತ್ ಶರ್ಮಾ ಕುಟುಂಬಕ್ಕೆ 1 ಕೋ.ರೂ. ಪರಿಹಾರ ಘೋಷಿಸಿದ ಕೇಜ್ರಿವಾಲ್
Update: 2020-03-02 15:25 GMT
ಹೊಸದಿಲ್ಲಿ,ಮಾ.2: ಕಳೆದ ವಾರ ದಿಲ್ಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ಸಂಸ್ಥೆ (ಐಬಿ)ಯ ಉದ್ಯೋಗಿ ಅಂಕಿತ್ ಶರ್ಮಾ ಅವರ ಕುಟುಂಬಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಒಂದು ಕೋ.ರೂ.ಪರಿಹಾರವನ್ನು ಘೋಷಿಸಿದ್ದಾರೆ.
ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದ 26ರ ಹರೆಯದ ಶರ್ಮಾರ ಶವವು ಬುಧವಾರ 400ಕ್ಕೂ ಅಧಿಕ ಚೂರಿ ಇರಿತದ ಗಾಯಗಳೊಂದಿಗೆ ಹಿಂಸಾಗ್ರಸ್ತ ಈಶಾನ್ಯ ದಿಲ್ಲಿಯ ಜಾಫ್ರಾಬಾದ್ ಪ್ರದೇಶದ ಮೋರಿಯೊಂದರಲ್ಲಿ ಪತ್ತೆಯಾಗಿತ್ತು.
ಆಪ್ ನಾಯಕ ತಾಹಿರ್ ಹುಸೇನ್ ಅವರ ಬೆಂಬಲಿಗರು ತನ್ನ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಶರ್ಮಾರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದಾರೆ. ರವೀಂದ್ರ ಕೂಡ ಐಬಿ ಉದ್ಯೋಗಿಯಾಗಿದ್ದಾರೆ.