ಉಚ್ಚಿಲ: ಸೇತುವೆಗೆ ಪಿಕಪ್ ವಾಹನ ಢಿಕ್ಕಿ: ಚಾಲಕನಿಗೆ ಗಾಯ

Update: 2020-03-03 04:46 GMT

ಉಚ್ಚಿಲ : ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಕೆ.ಸಿ.ರೋಡು ಉಚ್ಚಿಲ ಸೇತುವೆ ಬಳಿ  ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಪಿಕಪ್ ಚಾಲಕ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಕೇರಳಕ್ಕೆ ಮೀನು ಸಾಗಿಸುತ್ತಿದ್ದ ವಾಹನ, ಚಾಲಕ ನಿದ್ದೆಗಣ್ಣಿನಿಂದಿದ್ದರು ಎಂದು‌ ಹೇಳಲಾಗುತ್ತಿದೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮಂಗಳೂರು ನಾಗುರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News