ಅಲ್ ಮದೀನ: ಹರೇಕಳ ಹಾಜಬ್ಬರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ

Update: 2020-03-03 17:13 GMT

ನರಿಂಗಾನ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ವಿದಾರ್ಥಿನಿಲಯದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ  “ಅಕ್ಷರ ಸಂತ’ ಹರೇಕಳ ಹಾಜಬ್ಬರಿಗೆ ಅಭಿನಂದನಾ ಸಮಾರಂಭವು ಇತ್ತೀಚೆಗೆ ನಡೆಯಿತು.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಯೂನುಸ್ ಅಹ್ಸನಿ ನಾದಾಪುರಂ ಉದ್ಘಾಟಿಸಿದರು. ಅಬ್ದುಲ್ ರಝಾಕ್ ಮಾಸ್ಟರ್ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಅಲ್ ಮದೀನ ಮಲಾಝ್ ಸಮಿತಿಯ ಗೌರವಾಧ್ಯಕ್ಷರಾದ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಸಲಾಂ ಅಹ್ಸನಿ, ಶಾಲಾ ಸಂಚಾಲಕರಾದ ಹಾಜಿ ಅಬ್ದುಲ್ಲ ಮೋರ್ಲ, ಶೌಕತ್ ಹಾಜಿ ದೇರಳಕಟ್ಟೆ, ಕುಂಞಿಬಾವ ಹಾಜಿ ಕಲ್ಕಟ್ಟ, ಇಬ್ರಾಹೀಂ ಉಳ್ಳಾಲ ಮಲಾಝ್, ಮುಹಮ್ಮದ್ ಮಾಸ್ಟರ್,  ಅಬ್ದುಲ್ ಖಾದರ್ ಝುಹ್ರಿ, ಹೈದರ್ ಸಖಾಫಿ, ಇಕ್ಬಾಲ್ ಮರ್ಝೂಖಿ, ಹಾಫಿಲ್ ಮರ್ಶದ್ ಹಿಮಮಿ, ಹಾಫಿಲ್ ರಿಫಾಈ , ಜುನೈದ್ ಮರ್ಝೂಖಿ, ಝೈನುಲ್ ಆಬಿದ್ ಸಖಾಫಿ, ಹಝ್ರತ್ ಮುಹಮ್ಮದ್ ಅಬ್ರಾರ್ ಫಾಝಿಲ್, ಉಮರ್ ಶಾಫಿ ಸಖಾಫಿ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಹಾಫಿಲ್ ಇರ್ಪಾನ್ ಖಿರಾಅತ್ ಪಠಿಸಿದರು. ಹಾಜಿ ಮೊಯ್ದಿನ್ ಕುಂಞಿ ಮಲಾಝ್ ಮೊಂಟೆಪದವು ವಂದಿಸಿದರು. ವಿದ್ಯಾರ್ಥಿ ಹಾಮಿದ್ ಅನ್ವರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News