ಸ್ಪಂದನ ಟ್ರಸ್ಟ್‌ನಿಂದ ಮಹಿಳಾ ದಿನಾಚರಣೆ

Update: 2020-03-04 05:44 GMT

ಮಂಗಳೂರು, ಮಾ.4: ಜೆಪ್ಪುವಿನ ಸ್ಪಂದನ ಟ್ರಸ್ಟ್ ವತಿಯಿಂದ ಮಹಿಳಾ ಸ್ವ- ಸಹಾಯ ಸಂಘಗಳ ಸಹಕಾರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾ.1ರಂದು ಅಡ್ಯಾರ್ ಕಟ್ಟೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ವಕೀಲೆ ಹಾಗೂ ಬಾಲ ಅಪರಾಧಿ ರಕ್ಷಣಾ ಸಮಿತಿಯ ಸದಸ್ಯೆ ಗೌರಿ ಮಾತನಾಡಿದರು.

ಸ್ಪಂದನ ಟ್ರಸ್ಟ್ ಆಡಳಿತಾಧಿಕಾರಿ ವಂ.ಭಗಿನಿ ಹೆಲೆನ್ ಫೆರ್ನಾಂಡಿಸ್ ಹಾಗೂ ಸಂಯೋಜಕ ವಿಕ್ಟರ್ ವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಹಿರಿಯ ಮಹಿಳೆ ವಿಮಲಾ ಕೊಟ್ಟಾರಿಯವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಕಾರ್ಯಕರ್ತೆ ಲಿಝಿ ಹಾಗೂ ಸುರೇಖಾ ಉಪಸ್ಥಿತರಿದ್ದರು. 150 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು. ಜಾನೆಟ್ ಸ್ವಾಗತಿಸಿದರು. ವಾಣಿ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News