ದಿಲ್ಲಿ ಹಿಂಸಾಚಾರ: ಕಾನ್‌ಸ್ಟೇಬಲ್ ಹತ್ಯೆ ಪ್ರಕರಣದ 7 ಆರೋಪಿಗಳ ಬಂಧನ

Update: 2020-03-12 16:06 GMT

ಹೊಸದಿಲ್ಲಿ, ಮಾ.12: ದಿಲ್ಲಿಯಲ್ಲಿ ಫೆ.24ರಂದು ನಡೆದಿದ್ದ ಹೆಡ್‌ಕಾನ್‌ಸ್ಟೇಬಲ್ ರತನ್‌ಲಾಲ್ ಹತ್ಯೆ ಘಟನೆಗೆ ಸಂಬಂಧಿಸಿ 7 ಆರೋಪಿಗಳನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಗಾಮ್ರಿ ಬಡಾವಣೆ ಪ್ರದೇಶದಲ್ಲಿ 85 ವರ್ಷದ ಅಕ್ಬರಿ ಬೇಗಂರನ್ನು ಅವರ ಮನೆಯಲ್ಲೇ ಸುಟ್ಟು ಹಾಕಿದ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರದಿಂದ ತತ್ತರಿಸಿದ್ದ ಈಶಾನ್ಯ ದಿಲ್ಲಿಯಲ್ಲಿ ಈಗ ಸಹಜ ಸ್ಥಿತಿ ನೆಲೆಸಿದ್ದು ಕಾನೂನು ಮತ್ತು ಸುವ್ಯವಸ್ಥೆ ಮರಳಿದೆ. ಹಿಂಸಾಚಾರ ಘಟನೆಗೆ ಸಂಬಂಧಿಸಿ 712 ಎಫ್‌ಐಆರ್ ದಾಖಲಿಸಿದ್ದು 200 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಎಂಎಸ್ ರಾಂಧವ ಹೇಳಿದ್ದಾರೆ.

ಹಿಂಸಾಚಾರ ಘಟನೆಯಲ್ಲಿ ಆರೋಪಿಗಳೆಂದು ಹೆಸರಿಸಿರುವ ವ್ಯಕ್ತಿಗಳ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ . ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ವೀಡಿಯೊ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ಹಲವರು ತಾವೇ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News