ಕಡಬ: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು
Update: 2020-03-16 04:16 GMT
ಕಡಬ, ಮಾ.16: ರೈಲಿನಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಮಂಗಳೂರು - ಸುಬ್ರಹ್ಮಣ್ಯ ರೋಡ್ ರೈಲ್ವೆ ಮಾರ್ಗದ ಕೊರಿಯಾರ್ ಗೇಟ್ ಬಳಿ ಸೋಮವಾರ ಕಂಡುಬಂದಿದೆ.
102ನೇ ನೆಕ್ಕಿಲಾಡಿ ಗ್ರಾಮದ ದಂಡುಗಿರಿ ನಿವಾಸಿ ಮೊಡೆಂಕಿಲ ಎಂಬವರ ಪುತ್ರ ಸುಂದರ(35) ಮೃತಪಟ್ಟವರು. ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದಿರುವರೋ ಎಂದು ತನಿಖೆಯ ನಂತರ ತಿಳಿದು ಬರಬೇಕಿದೆ. ಶನಿವಾರ ಸಮೀಪದಲ್ಲಿ ಆದಿ ಮೊಗೇರ್ಕಳ ದೈವದ ನೇಮೋತ್ಸವ ನಡೆದಿದ್ದು, ರವಿವಾರ ಸಂಜೆಯವರೆಗೂ ಅಲ್ಲಿದ್ದರು ಎನ್ನಲಾಗಿದೆ.