ಕೊರೋನ ಹಿನ್ನೆಲೆ: ಜುಮಾ ನಮಾಝ್ಗಳನ್ನು ಶೀಘ್ರ ಪೂರ್ಣಗೊಳಿಸಲು ಖಾಝಿ ಬೇಕಲ್ ಉಸ್ತಾದ್ ಕರೆ
Update: 2020-03-17 06:18 GMT
ಮಂಗಳೂರು, ಮಾ.17: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಜನರು ಹೆಚ್ಚಾಗಿ ಒಂದೇ ಕಡೆ ಸೇರುವ ಜುಮಾ ನಮಾಝ್ಗಳನ್ನು ಶೀಘ್ರವಾಗಿ ಮುಗಿಸಲು ಮುಂದಾಗಬೇಕು. ಅದೇರೀತಿ ದುಆಗಳನ್ನು ಕೂಡಾ ದೀರ್ಘಾವಧಿಗೆ ವಿಸ್ತರಿಸದಂತೆ ಎಚ್ಚರ ವಹಿಸಬೇಕು. ಸಭೆ, ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರುವುದನ್ನು ಉಪೇಕ್ಷಿಸಬೇಕು. ಈ ನಿಟ್ಟಿನಲ್ಲಿ ಸರಕಾರ ವಿಧಿಸಿರುವ ಸೂಚನೆಯನ್ನು ಪಾಲಿಸುವಂತೆ ಖಾಝಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.