ಬೆಂಗಳೂರಿನಲ್ಲಿರುವ ಬಂಡುಕೋರರನ್ನು ಬಿಡುಗಡೆ ಮಾಡಿಸಿ: ಮಧ್ಯಪ್ರದೇಶ ರಾಜ್ಯಪಾಲರಿಗೆ ಕಾಂಗ್ರೆಸ್ ಆಗ್ರಹ

Update: 2020-03-18 14:26 GMT

ಭೋಪಾಲ,ಮಾ,18: ಮಧ್ಯಪ್ರದೇಶದ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಬುಧವಾರ ಭೇಟಿಯಾದ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಬಿಜೆಪಿಯ ‘ವಶದಲ್ಲಿರುವ’ ತಮ್ಮ 16 ಬಂಡುಕೋರ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡಿಸಲು ತನ್ನ ಸಾಂವಿಧಾನಿಕ ಅಧಿಕಾರವನ್ನು ಬಳಸುವಂತೆ ಆಗ್ರಹಿಸಿದರು.

ಬುಧವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಇತರ ಶಾಸಕರು ಬೆಂಗಳೂರಿನಲ್ಲಿ ಬಂಡುಕೋರ ಶಾಸಕರನ್ನು ಭೇಟಿಯಾಗುವುದನ್ನು ಅಲ್ಲಿಯ ಪೊಲೀಸರು ತಡೆದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ ಶಾಸಕರನ್ನು ಭೇಟಿಯಾಗಲು ಬಯಸಿದ್ದರು,ಆದರೆ ಬೆಂಗಳೂರು ಪೊಲೀಸರು ಮತ್ತು ಸ್ಥಳೀಯ ಆಡಳಿತ ಅವರನ್ನು ಮತ್ತು ಇತರ ಕಾಂಗ್ರೆಸ್ ಶಾಸಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ಸಲ್ಲಿಸಿರುವ ಅಹವಾಲಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News