ಕುದ್ರೋಳಿ: ವಕ್ಫ್ ಆಸ್ತಿ ಮರು ವಶ; ಶಾಲಾ ಕಟ್ಟಡಕ್ಕೆ ಬೀಗಮುದ್ರೆ
Update: 2020-03-20 05:16 GMT
ಮಂಗಳೂರು, ಮಾ.20: ವಕ್ಫ್ ಅಧೀನದ ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿಗೆ ಒಳಪಟ್ಟ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಶಾಲಾ ಕಟ್ಟಡವನ್ನು ನ್ಯಾಯಾಲಯದ ಆದೇಶದಂತೆ ಗುರುವಾರ ಮರು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿ ಅಧೀನದ 15 ಸೆಂಟ್ಸ್ ಜಾಗದಲ್ಲಿ ಖಾಸಗಿ ಶಾಲೆಯೊಂದು ಕಾರ್ಯಾಚರಿಸುತ್ತಿತ್ತು. ಈ ಜಾಗದ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಈ ಜಾಗವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಗುರುವಾರ ಸಂಜೆ ಮಸೀದಿಯ ಸ್ವಾಧೀನಕ್ಕೆ ಪಡೆಯಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರ ಕಚೇರಿ ಹಾಗೂ ಮುಖ್ಯ ಗೇಟಿಗೆ ಬೀಗಮುದ್ರೆ ಜಡಿಯಲಾಗಿದೆ.