ವಿಟ್ಲ: ಹಲ್ಲೆ ಪ್ರಕರಣ; ಇಬ್ಬರ ಬಂಧನ

Update: 2020-03-22 18:31 GMT

ವಿಟ್ಲ, ಮಾ.22: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಕೇಪು ನೀರ್ಕಜೆ ನಿವಾಸಿ ಅಜಯ್ ಯಾನೆ ಅಜಯ್ ಪ್ರಸಾದ್ (23), ಅಳಿಕೆ ಮಿತ್ತಳಿಕೆ ನಿವಾಸಿ ಪ್ರಖ್ಯಾತ್ (23) ಬಂಧಿತ ಆರೋಪಿಗಳು.

ಶನಿವಾರ ರಾತ್ರಿ ನವೀನ್ ಕೇಪು ಗ್ರಾಮದ ನೀರ್ಕಜೆ ಬಸ್ಸು ತಂಗುದಾಣದಲ್ಲಿ ನಿಂತುಕೊಂಡಿದ್ದಾಗ, ಅಜಯ್ ಮತ್ತು ಸಹಚರ ಬಂದು ತಮ್ಮನ ಮೇಲೆ ದಾಳಿ ಮಾಡಿದ ವಿಚಾರವನ್ನು ತೆಗೆದು, ಮಾರಕಾಯುಧದಿಂದ ನವೀನನ ಹೊಟ್ಟೆಗೆ ಮತ್ತು ದೇಹದ ಇತರ ಭಾಗಗಳಿಗೆ ಕಡಿದ್ದಾರೆ. ಪ್ರಖ್ಯಾತ್ ನವೀನನಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿಯುತ್ತಿದ್ದಾಗ, ಗಲಾಟೆ ಬಿಡಿಸಲು ಬಂದ ಬಡೆಕೋಡಿ ಗಣೇಶ ಬೆರಳಿಗೂ ಕಡಿದಿದ್ದಾನೆ ಎಂಬ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‍ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಪಿ ಎಸ್ ಐ ವಿನೋದ್ ರೆಡ್ಡಿ ಅವರ ಸೂಚನೆಯಂತೆ ಸಿಬ್ಬಂದಿಗಳಾದ ಜಯಕುಮಾರ್, ಪ್ರಸನ್ನ, ಲೋಕೇಶ್, ಪ್ರತಾಪ ರೆಡ್ಡಿ, ವಿನಾಯಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News