ವಾರಸುದಾರರಿಗೆ ಸೂಚನೆ

Update: 2020-03-23 12:58 GMT

ಉಡುಪಿ, ಮಾ.23: ಪುತ್ತೂರು ಗ್ರಾಮದ ಸಂತೆಕಟ್ಟೆಯ ಮೀನು ಮಾರುಕಟ್ಟೆಯ ಬಳಿಯಲ್ಲಿ ಮಾ.7ರಂದು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಈ ಸಂದರ್ಭದಲ್ಲಿ ವ್ಯಕ್ತಿ ತನ್ನ ಹೆಸರನ್ನು ಸುರೇಶ ಶೆಟ್ಟಿ, ಪ್ರಾಯ: 56 ವಷರ್, ತಂದೆ: ಗೋಪಾಲ ಶೆಟ್ಟಿ, ವಾಸ: ಬೆಳಂಜೆ,  ಹೆಬ್ರಿ ಎಂಬುದಾಗಿ ಮಾಹಿತಿ ನೀಡಿದ್ದರು.

ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಮಾ.10ರಂದೇ ಮೃತಪಟ್ಟಿದ್ದು, ಆತನ ವಾರಸುದಾರರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಮೃತದೇಹವನ್ನು ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತರ ವಾರಸುದಾರರು/ರಕ್ತಸಂಬಂಧಿಕರು ಯಾರಾದರೂ ಇದ್ದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ (ದೂ.ಸಂಖ್ಯೆ:0820-2520444), ಪೊಲೀಸ್ ವೃತ್ತ ನಿರೀಕ್ಷಕರು (ದೂ.ಸಂಖ್ಯೆ: 0820-2520329), ಉಡುಪಿ ಜಿಲ್ಲಾ ನಿಸ್ತಂತು ಕಚೇರಿ (ದೂ.ಸಂಖ್ಯೆ: 0820-2526444), ಉಡುಪಿ ನಗರ ಠಾಣೆಯ ಇ-ಮೇಲ್ udupitownudp@ksp.gov.inಗೆ ಮಾಹಿತಿ ನೀಡುವಂತೆ ಉಡುಪಿ ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News