ಹಣಕಾಸು ಮಸೂದೆಗೆ ಲೋಕಸಭೆಯ ಅಸ್ತು

Update: 2020-03-23 16:39 GMT

ಹೊಸದಿಲ್ಲಿ, ಮಾ. 23: ಕೊರೋನವೈರಸ್ ಭೀತಿಯಿಂದಾಗಿ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ನಿಗದಿಯಂತೆ ಮುಂಗಡಪತ್ರ ಅಧಿವೇಶನವು ಎ.3ರಂದು ಅಂತ್ಯಗೊಳ್ಳಲಿತ್ತು.

ಸಂಸತ್ ಅಧಿವೇಶನಕ್ಕೆ ತೆರೆ ಬೀಳುವ ಮುನ್ನ ಸೋಮವಾರ ಲೋಕಸಭೆಯು ಹಣಕಾಸು ಮಸೂದೆ,2020ನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು.

ಸರಕಾರವು ಮಸೂದೆಗೆ 40ಕ್ಕೂ ಹೆಚ್ಚಿನ ತಿದ್ದುಪಡಿಗಳನ್ನು ತಂದಿದ್ದು,ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿದರು.

ಸ್ಪೀಕರ್ ಓಂ ಬಿರ್ಲಾ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲು ನಿರ್ಧರಿಸಲಾಗಿತ್ತು. ಪ್ರತಿಪಕ್ಷ ಕೆಲವು ತಿದ್ದುಪಡಿಗಳನ್ನು ಮಂಡಿಸಿತ್ತಾದರೂ ಅವು ತಿರಸ್ಕೃತಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News