ದ.ಕ. ಜಿಲ್ಲೆ ಸಂಪೂರ್ಣ ಬಂದ್

Update: 2020-03-28 04:11 GMT

ಮಂಗಳೂರು, ಮಾ.28: ಒಂದೇ ದಿನ‌ ಎರಡು ಕೊರೋನ ವೈರಸ್ ದೃಢಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತದ ಸೂಚನೆಯ ಮೇರೆಗೆ ದ.ಕ. ಜಿಲ್ಲೆಯಲ್ಲಿ ಶನಿವಾರ ಸಂಪೂರ್ಣ ಬಂದ್ ಆಗಿದೆ.

ಕಳೆದ ಮೂರು ದಿನದಲ್ಲಿ‌ ಕೆಲವು ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದ ಪೊಲೀಸರು ಶನಿವಾರ ತುರ್ತು ಸೇವೆಯ ವಾಹನಗಳ‌ ಮತ್ತು ಸಿಬ್ಬಂದಿ ವರ್ಗದ ಓಡಾಟ ಹೊರತುಪಡಿಸಿ ಬೇರೆ ಎಲ್ಲಾ ವಾಹನ ಮತ್ತು‌ ಜನ ಸಂಚಾರಕ್ಕೆ‌ ನಿರ್ಬಂಧ ಹೇರಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದೆ ರಸ್ತೆಗೆ ಇಳಿದಿದ್ದ ವಾಹನ, ಸವಾರರನ್ನು ಪೊಲೀಸರು ಬಂದ್ ಕುರಿತು ‌ಮನವರಿಕೆ ಮಾಡಿಕೊಟ್ಟು ವಾಪಸ್‌ ಕಳುಹಿಸಿಕೊಡುತ್ತಿರುವ ದೃಶ್ಯ ಕಂಡು ಬಂತು.

 ನಗರ ಮತ್ತು ಹೊರ ವಲಯದ ಕೆಲವೇ ಮೆಡಿಕಲ್‌ಗಳು ತೆರೆಯಲ್ಪಟ್ಟಿವೆ. ಉಳಿದಂತೆ ಎಲ್ಲವೂ ಬಂದ್ ಆಗಿವೆ. ದಿನಸಿ ಸಹಿತ ಯಾವುದೇ ತರಕಾರಿ, ಹಣ್ಣುಹಂಪಲುಗಳ ಅಂಗಡಿ ತೆರೆಯಲಿಲ್ಲ. ಲಾಕ್ ಡೌನ್ ಸೂಚನೆಯ ಹೊರತಾಗಿಯೂ ಬೆರಳೆಣಿಕೆಯ ರಿಕ್ಷಾಗಳು ಓಡಾಡುತ್ತಿದ್ದವು. ಆದರೆ ಶನಿವಾರ ಯಾವೊಂದು ಆಟೊ ರಿಕ್ಷಾ ಕೂಡ ರಸ್ತೆಗೆ ಇಳಿಯಲಿಲ್ಲ. ದ್ವಿಚಕ್ರದ ಮೂಲಕ ಸಂಚಾರಕ್ಕೆ ಯತ್ನಿಸುತ್ತಿದ್ದ ಒಂದೆರಡು ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News