ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2020-03-28 15:24 GMT
ಕುಂದಾಪುರ, ಮಾ.28: ವಿಪರೀತ ಮದ್ಯ ಸೇವನೆ ಚಟ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹೆಮ್ಮಾಡಿ ಗ್ರಾಮದ ಸಂತೋಷ ನಗರ ನಿವಾಸಿ ಬಾಬು ಪೂಜಾರಿ ಎಂಬವರ ಮಗ ರಾಘವೇಂದ್ರ(37) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಮಾ.27ರಂದು ರಾತ್ರಿ ಮನೆಯ ಬಾವಿಯ ನೀರೆತ್ತುವ ಹಗ್ಗಕ್ಕೆ ನೇಣು ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಉಡುಪಿ: ಕಟಪಾಡಿ ಪೋಸಾರು ನಿವಾಸಿ ದಿನೇಶ್ ಶೆಟ್ಟಿ(52) ಎಂಬವರು ಕೌಟುಂಬಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾ.27ರಂದು ರಾತ್ರಿ ತಾನು ವಾಸವಾಗಿರುವ ಮಾರ್ಪಳ್ಳಿಯ ಬಾಡಿಗೆಮನೆಯ ಫ್ಯಾನಿನ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.