ಕಣ್ಣೂರು: ಸೆಂಟ್ರಲ್ ಜೈಲಿನ ಕೊರೋನ ನಿಗಾ ಕೇಂದ್ರದಿಂದ ಕೈದಿ ಪರಾರಿ

Update: 2020-04-03 05:53 GMT
ಸಾಂದರ್ಭಿಕ ಚಿತ್ರ

ಕಾಸರಗೋಡು, ಎ.3: ಕಣ್ಣೂರು ಸೆಂಟ್ರಲ್ ಜೈಲಿನ ಕೊರೋನ ನಿಗಾ ಕೇಂದ್ರದಿಂದ ಕೈದಿಯೋರ್ವ ಪರಾರಿಯಾದ ಘಟನೆ ನಡೆದಿದೆ. 

ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಅಜಯ್ ಬಾಬು ಪರಾರಿಯಾದ ಆರೋಪಿ.

ಅಜಯ್ ಕಾಸರಗೋಡಿನ ಕೆನರಾ ಬ್ಯಾಂಕ್ ನ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಮಾರ್ಚ್ 25ರಂದು ಕಾಸರಗೋಡಿನಿಂದ ಅಜಯ್ ಬಾಬು ನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು .

ಕೊರೋನ ವೈರಸ್ ಸೋಂಕಿತ ವಲಯವಾಗಿರುವ ಕಾಸರಗೋಡಿನಿಂದ ಕರೆತರಲಾದ ಕೈದಿಯನ್ನು ಜೈಲಿನ ನಿಗಾ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಕೇಂದ್ರದ ವೆಂಟಿಲೇಷನ್ ಮುರಿದು ಅಜಯ್ ಬಾಬು ಪರಾರಿಯಾಗಿದ್ದಾನೆ.

ಪೊಲೀಸರು ಈತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News