9 ಗಂಟೆಗೆ ಹಾರಿಬಿಟ್ಟ ಗೂಡು ದೀಪ ಗುಡಿಸಲಿಗೆ ಬಿದ್ದು ಭಾರೀ ಬೆಂಕಿ ಅವಘಡ

Update: 2020-04-06 16:02 GMT
ಸಾಂದರ್ಭಿಕ ಚಿತ್ರ

ಜೈಪುರ,ಎ.6: ಇಲ್ಲಿಯ ವೈಶಾಲಿನಗರದಲ್ಲಿ ಗುಡಿಸಲೊಂದರ ಮೇಲೆ ರವಿವಾರ ರಾತ್ರಿ ಹಾರಾಡುವ ಗೂಡುದೀಪ ಬಿದ್ದ ಪರಿಣಾಮ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಯಾವುದೇ ಸಾವುನೋವು ವರದಿಯಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಕೊರೋನ ವೈರಸ್ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಬೆಂಬಲವನ್ನು ವ್ಯಕ್ತಪಡಿಸಲು ರವಿವಾರ ರಾತ್ರಿ ಒಂಭತ್ತು ಗಂಟೆಗೆ ಒಂಭತ್ತು ನಿಮಿಷಗಳ ಕಾಲ ದೀಪಗಳನ್ನು ಬೆಳಗಿಸಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಆದರೆ ಅತಿರೇಕದ ಉತ್ಸಾಹವನ್ನು ಪ್ರದರ್ಶಿಸಿದ್ದ ಕೆಲವರು ಪಟಾಕಿಗಳನ್ನು ಹಚ್ಚುವ ಜೊತೆಗೆ ಗಾಳಿಯಲ್ಲಿ ಹಾರಾಡುವ ಗೂಡುದೀಪಗಳನ್ನು ತೇಲಿಬಿಟ್ಟಿದ್ದರು.

ಗುಡಿಸಲಿನ ಸಮೀಪದ ಮನೆಯೂ ಬೆಂಕಿಯಲ್ಲಿ ಸುಟ್ಟಿದೆ. ಸಕಾಲದಲ್ಲಿ ಸ್ಥಳವನ್ನು ತಲುಪಿದ ಅಗ್ನಿಶಾಮಕ ದಳವು ಬೆಂಕಿ ಇನ್ನಷ್ಟು ಮನೆಗಳಿಗೆ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News