ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತನೆಯಾದ ಹೋಟೆಲ್‌ನಲ್ಲಿ ಬೆಂಕಿ ಅನಾಹುತ

Update: 2020-04-21 18:08 GMT

 ಮುಂಬೈ, ಎ.21: ಮುಂಬೈಯ ನಾಗಪಾದ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತನೆಯಾದ ಹೋಟೆಲ್‌ನಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

  ಮುಂಬೈ ಸೆಂಟ್ರಲ್‌ನ ಬೆಲಾಸಿಸ್ ರಸ್ತೆಯಲ್ಲಿರುವ ಐದು ಮಹಡಿಯ ರಿಪ್ಪನ್ ಪ್ಯಾಲೇಸ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳದ ಐದು ವಾಹನಗಳು ಹಾಗೂ 4 ಜಂಬೋ ಟ್ಯಾಂಕರ್‌ಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಕ್ವಾರಂಟೈನ್ ಕೇಂದ್ರದಲ್ಲಿ 25 ಜನರಿದ್ದರು. ಅಗ್ನಿಶಾಮಕ ದಳದವರು ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News