ಸಾಧುಗಳ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಬಿಜೆಪಿ ಜೊತೆ ನೇರ ಸಂಬಂಧ: ಆರೋಪ

Update: 2020-04-23 16:28 GMT

ಹೊಸದಿಲ್ಲಿ: ಪಾಲ್ಘಾರ್ ನಲ್ಲಿ ಇಬ್ಬರು ಸಾಧುಗಳನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಕೆಲವು ಆರೋಪಿಗಳು ಬಿಜೆಪಿಯೊಂದಿಗೆ ನೇರ ಸಂಬಂಧ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ 110 ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಈಶ್ವರ್ ಬಂಧು ನಿಕೋಲೆ ಎಂಬಾತ ಗಡ್ಚಿಂಚಲೆ ಗ್ರಾಮದ ಬಿಜೆಪಿ ಬೂತ್ ಸಮಿತಿ ಸದಸ್ಯ ಮತ್ತು ಮತ್ತೊಬ್ಬಾತ ಭಾವು ಸಾತೆ ಬಿಜೆಪಿಯ ಗ್ರಾಮ ಸಮಿತಿಯ ಸದಸ್ಯ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆರೋಪಿಸಿದ್ದಾರೆ.

“ಸಾಧುಗಳ ಹತ್ಯೆ ಪ್ರಕರಣದ ಬಗ್ಗೆ ನಿಜವಾಗಿಯೂ ಬಿಜೆಪಿಗೆ ಕಾಳಜಿ ಇದ್ದಿದ್ದರೆ ಪಕ್ಷವು ಈ ಆರೋಪಿಗಳನ್ನು ಪಕ್ಷದಿಂದ ಹೊರ ಹಾಕಬೇಕು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News